ಪ್ರಜಾಪ್ರಭುತ್ವಕ್ಕೆ ಅಪಾಯವಿದೆ, ಸಂತೋಷ ಹೆಗ್ಡೆ

ಲಿಬರ್ಟಿ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಗುರುವಾ ಏರ್ಪಡಿಸಿದ್ದ ಭಾರತದ ಸಬಲೀಕರಣ, ಪ್ರಜಾಪ್ರಭುತ್ವ ಅರ್ಥಪೂರ್ಣಗೊಳಿಸುವಿಕೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸ್ವಾತಂತ್ರ್ಯ ನಂತರ ಎರಡು ದಶಕಗಳ ಕಾಲ ಜನಪ್ರತಿನಿಧಿಗಳು ಚುನಾವಯಿತರಾದವರು, ಪ್ರಜೆಗಳನ್ನು ಕೂಲಿಗಳಂತೆ ನಡೆಸಿಕೊಂಡರು. ಪರಿಣಾಮವಾಗಿ ಜನಸಾಮಾನ್ಯ ತಾಳ್ಮೆ ಕಳೆದುಕೊಂಡಿದ್ದಾನೆ ಎಂದರು.
40 ವರ್ಷಗಳಿಂದೀಚೆಗೆ ಆಡಳಿತ ನಡೆಸಿದ ಯಾವುದೇ ಸರ್ಕಾರ, ಇದು ನನ್ನ ಸರ್ಕಾರ, ನನಗಾಗಿ ಇರುವ ಒಂದು ವ್ಯವಸ್ಥೆ ಎಂದು ಜನರಿಗೆ ಅನಿಸಿಯೇ ಇಲ್ಲ. ದೇಶದ ಎಲ್ಲ ಶ್ರೀಸಾಮಾನ್ಯನ ಭಾವನೆಯೂ ಇದೆ ಆಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸದರು ಕೇವಲ ಭತ್ಯೆಗಾಗಿ ಸಂಸತ್ತಿನಲ್ಲಿ ಸಹಿ ಹಾಕಿ ಕಲಾಪದಿಂದ ದೂರು ಉಳಿಯುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಹೆಗ್ಡೆ ಹೇಳಿದರು.
ಚುನಾಯಿತ ಪ್ರತಿನಿಧಿಗಳು ತಮ್ಮನ್ನು ತಾವು ಬಾಸ್ ಎಂದು ಭಾವಿಸಿಕೊಳ್ಳುವ ಪರಿಸ್ಥಿತಿ ಕೊನೆಗಾಣಬೇಕು. ತಾವು ಜನತಾ ಸೇವಕರು ಎಂಬ ಮನೋಭಾವನೆ ಬೆಳಸಿಕೊಳ್ಳಬೇಕು. ಅಂದಾಗ ಮಾತ್ರ ಭಾರತ ಬಲಿಶಾಲಿ ದೇಶವಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದು ಸಂತೋಷ ಹೆಗ್ಡೆ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ವೆಬ್ ಸೈಟ್ ನಲ್ಲಿ ಹೈಕೋರ್ಟ್ ತೀರ್ಪಿನ ಪ್ರತಿ












Click it and Unblock the Notifications