ಲೋಕಸಭೆ ಚುನಾವಣೆ 2009 ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು, ಏ. 15 : ಕರ್ನಾಟಕದಲ್ಲಿರುವ 28 ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ. ಕರ್ನಾಟಕದಲ್ಲಿ ಐದು ಮಂದಿ ಮಾಜಿ ಮುಖ್ಯಮಂತ್ರಿಗಳು ಅಖಾಡದಲ್ಲಿರುವುದು ವಿಶೇಷವಾಗಿದೆ. ಕಳೆದ ವಿಧಾನಸಭೆ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾದರೆ, ಸೋತು ಸುಣ್ಣವಾಗಿರುವ ಕಾಂಗ್ರೆಸ್ ಗೆ ಮಾಡು ಇಲ್ಲವೇ ಮಡಿ ಹೋರಾಟ ಕಣವಾಗಿ ಮಾರ್ಪಾಡಾಗಿದೆ. ಉಪಚುನಾವಣೆಯಲ್ಲಿ ತನ್ನ ಸಾಮರ್ಥ್ಯ ಮೆರೆದಿದ್ದ ಜೆಡಿಎಸ್ ಪಕ್ಷವನ್ನು ಈ ಚುನಾವಣೆಯಲ್ಲಿ ಅಲ್ಲಗಳೆಯುವಂತಿಲ್ಲ.

ಕ್ಷೇತ್ರದ ಹೆಸರು ಬಿಜೆಪಿ ಜೆಡಿಎಸ್ ಕಾಂಗ್ರೆಸ್
ಬೆಂಗಳೂರು ದಕ್ಷಿಣ ಅನಂತಕುಮಾರ್ ಬಿಪಿ ರಾಧಕೃಷ್ಣ ಕೃಷ್ಣ ಭೈರೇಗೌಡ
ಬೆಂಗಳೂರು ಉತ್ತರ ಡಿ ಬಿ ಚಂದ್ರೇಗೌಡ ಸುರೇ೦ದ್ರಬಾಬು ಸಿ ಕೆ ಜಾಫರ್ ಷರೀಫ್
ಬೆಂಗಳೂರು ಸೆಂಟ್ರಲ್ ಪಿಸಿ ಮೋಹನ್ ಜಮೀರ್ ಅಹಮ್ಮದ್ ಖಾನ್ ಎಚ್ ಟಿ ಸಾಂಗ್ಲಿಯಾನ
ಬೆಂಗಳೂರು ಗ್ರಾಮಾಂತರ ಸಿ ಪಿ ಯೋಗೀಶ್ವರ ಎಚ್ ಡಿ ಕುಮಾರಸ್ವಾಮಿ ತೇಜಸ್ವಿನಿಗೌಡ
ಕೋಲಾರ ಡಿ ಎಸ್ ವೀರಯ್ಯ ಚ೦ದ್ರಣ್ಣ ಕೆ ಎಚ್ ಮುನಿಯಪ್ಪ
ಚಿಕ್ಕಬಳ್ಳಾಪುರ ಅಶ್ವಥ್ ನಾರಾಯಾಣ ಸಿ.ಆರ್ ಮನೋಹರ್ ವೀರಪ್ಪ ಮೊಯ್ಲಿ
ಹಾಸನ ಎಚ್ ಕೆ ಹನುಮೇಗೌಡ ಎಚ್ ಡಿ ದೇವೇಗೌಡ ಬಿ ಶಿವರಾಂ
ಮೈಸೂರು ಸಿ ಎಚ್ ವಿಜಯಶಂಕರ್ ಜೀವಿಜಯ ಎಚ್ ವಿಶ್ವನಾಥ್
ತುಮಕೂರು ಜಿ ಎಸ್ ಬಸವರಾಜು ಮುದ್ದುಹನುಮೇಗೌಡ ಪಿ ಕೋದಂಡರಾಮಯ್ಯ
ಬಿಜಾಪುರ ರಮೇಶ್ ಜಿಗಜಿಣಗಿ ***** ಪ್ರಕಾಶ ರಾಥೋಡ್
ಬಾಗಲಕೋಟೆ ಗದ್ದೀಗೌಡರ **** ಜಿಟಿ ಪಾಟೀಲ್
ಬಳ್ಳಾರಿ ಜೆ ಶಾಂತಾ **** ಎನ್ ವೈ ಹನುಮಂತಪ್ಪ
ಬೆಳಗಾವಿ ಸುರೇಶ್ ಅಂಗಡಿ ಎ ಬಿ ಪಾಟೀಲ್ ಅಮರಸಿಂಹ ಪಾಟೀಲ್
ಧಾರವಾಡ ಉತ್ತರ ಪ್ರಹ್ಲಾದ್ ಜೋಶಿ **** ಮಂಜುನಾಥ್ ಕುನ್ನೂರು
ಉತ್ತರ ಕನ್ನಡ ಅನಂತಕುಮಾರ್ ಹೆಗಡೆ ವಿ ಡಿ ಹೆಗ್ಡೆ ಮಾರ್ಗರೇಟ್ ಆಳ್ವ
ಹಾವೇರಿ ಶಿವಕುಮಾರ್ ಉದಾಸಿ ಶಿವಕುಮಾರ್ ಗೌಡ ಪಾಟೀಲ್ ಸಲೀಂ ಅಹ್ಮದ್
ಚಿಕ್ಕೋಡಿ ರಮೇಶ್ ಕತ್ತಿ **** ಪ್ರಕಾಶ್ ಹುಕ್ಕೇರಿ
ರಾಯಚೂರು ಸಣ್ಣ ಫಕೀರಪ್ಪ **** ರಾಜಾ ವೆಂಕಟಪ್ಪ ನಾಯಕ
ಬೀದರ್ ಗುರುಪಾದಪ್ಪ ನಾಗಮಾರಪಲ್ಲಿ ಸುಭಾಶ್ ನೇಳಗಿ ಎನ್ ಧರಂಸಿಂಗ್
ಗುಲ್ಬರ್ಗಾ ರೇವು ನಾಯರ ಬೆಳಮಗಿ ಬಾಬು ಹೊನ್ನನಾಯಕ್ ಮಲ್ಲಿಕಾರ್ಜುನ ಖರ್ಗೆ
ಚಿತ್ರದುರ್ಗ ಜನಾರ್ದನಸ್ವಾಮಿ ರತ್ನಾಕರ ಬಾಬು ಡಾ ತಿಪ್ಪೇಸ್ವಾಮಿ
ದಕ್ಷಿಣ ಕನ್ನಡ ನಳಿನ್ ಕುಮಾರ್ ಕಟೀಲ್ ****** ಜನಾರ್ದನ ಪೂಜಾರಿ
ಮಂಡ್ಯ ಎಲ್ ಆರ್ ಶಿವರಾಮೇಗೌಡ ಚೆಲುವರಾಯಸ್ವಾಮಿ ಅಂಬರೀಷ್
ಕೊಪ್ಪಳ ಶಿವರಾಮನಗೌಡ ಇಕ್ಬಾಲ್ ಅನ್ಸಾರಿ ಬಸವರಾಜ್ ರಾಯರೆಡ್ಡಿ
ದಾವಣಗೆರೆ ಜಿ ಎಂ ಸಿದ್ದೇಶ್ ***** ಎಸ್ ಎಸ್ ಮಲ್ಲಿಕಾರ್ಜುನ
ಚಾಮರಾಜನಗರ ಶ್ರೀಕಂಠಮೂರ್ತಿ ಕೋಟೆ ಶಿವಣ್ಣ ಧ್ರುವನಾರಾಯಣ
ಶಿವಮೊಗ್ಗ ಬಿ ವೈ ರಾಘವೇಂದ್ರ ***** ಎಸ್ ಬಂಗಾರಪ್ಪ
ಉಡುಪಿ-ಚಿಕ್ಕಮಗಳೂರು ಸದಾನಂದಗೌಡ ***** ಜಯಪ್ರಕಾಶ್ ಹೆಗ್ಡೆ

ದಕ್ಷಿಣ ಕನ್ನಡ - ಸಿಪಿಎಂ - ಬಿ ಮಾಧವ ( ಜನತಾದಳ ಎರಡು ಕ್ಷೇತ್ರ ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದೆ). ಉಡುಪಿ - ಸಿಪಿಐ - ರಾಧಾ ಸುಂದರೇಶ್ ( ಜನತಾದಳ ಎರಡು ಕ್ಷೇತ್ರ ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದೆ). ಶಿವಮೊಗ್ಗ, ಬಳ್ಳಾರಿ, ಚಿಕ್ಕೋಡಿಯಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿಲ್ಲ. ಬೆಂಗಳೂರು ದಕ್ಷಿಣದಲ್ಲಿ ಪಕ್ಷೇತರರಾಗಿ ಕ್ಯಾಪ್ಟನ್ ಗೋಪಿನಾಥ್ ಗಮನಸೆಳೆದಿರುವ ಅಭ್ಯರ್ಥಿ.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+