ಮಹಾಜನ್ ಸಹೋದರರ ಜಗಳ ಮತ್ತೊಮ್ಮೆ ಬೀದಿಗೆ
ಪ್ರಮೋದ್ ನ ಕಾಮುಕತನದಿಂದ ಬೇಸತ್ತ ಪತ್ನಿ ರೇಖಾ ಅವರು ವಿಚ್ಚೇದನ ಪಡೆಯಬಯಸಿದ್ದರು. ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಆಕೆ ದೂರು ಸಲ್ಲಿಸಿದ್ದರು ಎಂದು ಪ್ರವೀಣ್ ಹೇಳಿಕೆ ಉಲ್ಲೇಖಿಸಿ ಪ್ರಮುಖ ಮರಾಠಿ ಪತ್ರಿಕೆಯೊಂದು ಲೇಖನ ಪ್ರಕಟಿಸಿದೆ. ಪ್ರಮೋದ್ ಮಹಾಜನ್ ಅವರನ್ನು ಹತ್ಯೆಗೈದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರವೀಣ್ ಮಹಾಜನ್ ಜೈಲಿನಲ್ಲಿ ಮೈ ಅಲ್ಬಮ್ ಪುಸ್ತಕವೊಂದನ್ನು ಬರೆದಿದ್ದು, ಅದರ ಆಯ್ದ ಭಾಗಗಳನ್ನು ಪತ್ರಿಕೆ ಪ್ರಕಟಿಸಿದೆ.
ಉತ್ತಮ ಸಂಘಟಕನಾಗಿದ್ದ ಪ್ರಮೋದ್ ಪರಸ್ತ್ರೀಯರ ಬಗ್ಗೆ ಭಾರಿ ವ್ಯಾಮೋಹ ಇಟ್ಟುಕೊಂಡಿದ್ದರು. ತಾಕತ್ತಿನ ವ್ಯಕ್ತಿತ್ವದ ಪ್ರಮೋದ್ ಎಂತವರನ್ನೂ ಹೆದರಿಸುವ ಗಟ್ಟಿಗುಂಡಿಗೆಯನ್ನು ಹೊಂದಿದ್ದ ವ್ಯಕ್ತಿ ಎಂದಿರುವ ಬರೆದಿರುವ ಪ್ರವೀಣ್, ಪ್ರಮೋದ್ ಗೆ ಉತ್ತಮ ಸಂಪರ್ಕವಿತ್ತು. ಅಮೆರಿಕಾ, ಇಸ್ರೇಲ್ ಮತ್ತು ಇಂಗ್ಲೆಂಡ್ ಗೆ ಪದೆಪದೇ ಪ್ರವಾಸ ಹೋಗುತ್ತಿದ್ದಾಗ ಪರಸ್ತ್ರೀಯರನ್ನು ಕರೆದುಕೊಂಡು ಹೋಗುತ್ತಿದ್ದರು ಎಂದು ಮೈ ಅಲ್ಬಮ್ ನಲ್ಲಿ ಬರೆದುಕೊಂಡಿದ್ದಾರೆ ಎಂದು ಪತ್ರಿಕೆ ಪ್ರಕಟಿಸಿದೆ.
ಮೂರು ವರ್ಷಗಳ ಹಿಂದೆ ಪಿಸ್ತೂಲ್ ಬಳಸಿ ಪ್ರವೀಣ್ ತನ್ನ ಸಹೋದರರನ್ನು ಕೊಂದು ಹಾಕಿದ್ದರು. ಈಗ ಲೇಖನಿ ಉಪಯೋಗಿಸಿ ಮತ್ತೆ ಅವರನ್ನು ಕೊಂದರು ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)