ಕಾಂಗ್ರೆಸ್ ಸಂಸದ ಜಿಂದಾಲ್ ಮೇಲೆ ಚಪ್ಪಲಿ ಎಸೆತ

Now, Naveen Jindal gets the boot in Kurukshetra
ಕುರುಕ್ಷೇತ್ರ (ಹರ್ಯಾಣ), ಏ.10: ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಮೇಲೆ ಶೂ ಎಸೆದ ಘಟನೆ ಇನ್ನೂ ಹಸಿರಾಗಿರುವಾಗಲೇ ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಮೇಲೆ ಚಪ್ಪಲಿ ಎಸೆದ ಘಟನೆ ಶುಕ್ರವಾರ ನಡೆಯಿತು. ನಿವೃತ್ತ ಶಾಲಾ ಶಿಕ್ಷಕರೊಬ್ಬರು ನವೀನ್ ಜಿಂದಾಲ್ ಮೇಲೆ ಚಪ್ಪಲಿ ಎಸೆದು ಕಾಂಗ್ರೆಸ್ ಬಗೆಗಿನ ತಮ್ಮ ಅಸಹನೆಯನ್ನು ಪ್ರದರ್ಶಿಸಿದ ಘಟನೆ ಕುರುಕ್ಷೇತ್ರದ ಸಾರ್ವಜನಿಕ ಸಭೆಯಲ್ಲಿ ಇಂದು ನಡೆಯಿತು.

ಕುರುಕ್ಷೇತ್ರ ಲೋಕಸಭೆಗೆ ಉದ್ಯಮಿ ನವೀನ್ ಜಿಂದಾಲ್ ಸ್ಪರ್ಧಿಸಿದ್ದಾರೆ. ಇಂದು ಚುನಾವಣಾ ರ‌್ಯಾಲಿಯಲ್ಲಿ ಅವರು ಭಾಗವಹಿಸಿದ್ದರು. ಕಿಕ್ಕಿರಿದು ತುಂಬಿದ್ದ ಸಭೆಯಿಂದ ರಾಮ್ ಕುಮಾರ್ ಎಂಬ ನಿವೃತ್ತ ಶಿಕ್ಷಕ ಅವರ ಕಡೆಗೆ ಬಲವಾಗಿ ಚಪ್ಪಲಿ ಎಸೆದ. ಆದರೆ ಅದು ಗುರಿತಪ್ಪಿತು. ಕಾಂಗ್ರೆಸ್ ಪಕ್ಷದ ನೀಚ ರಾಜಕೀಯದಿಂದ ಬೇಸತ್ತು ತಾವು ಚಪ್ಪಲಿ ಎಸೆದಿದ್ದಾಗಿ ರಾಮ್ ಕುಮಾರ್ ನಂತರ ತಿಳಿಸಿದ್ದಾರೆ.

ಚಪ್ಪಲಿ ಎಸೆದ ಮರುಕ್ಷಣವೇ ಪೊಲೀಸರು ರಾಮ್ ಕುಮಾರ್ ಅವರನ್ನು ವಶಕ್ಕೆ ತೆಗೆದುಕೊಂಡು ರ‌್ಯಾಲಿಯಿಂದ ಆಚೆಗೆ ಕೊಂಡೊಯ್ದರು. ಮದ್ಯದ ಅಮಲಿನಲ್ಲಿ ಅವರು ಚಪ್ಪಲಿ ಎಸೆದಿರುವುದಾಗಿ ಜಿಂದಾಲ್ ತಿಳಿಸಿದರು. ಪಿ.ಚಿದಂಬರಂ ಮೇಲೆ ಶೂ ಎಸೆತದ ಪರಿಣಾಮ ಜಗದೀಶ್ ಟೈಟ್ಲರ್ ತಲೆದಂಡ ತೆರಬೇಕಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

(ಏಜೆನ್ಸೀಸ್)

ಗೃಹ ಸಚಿವ ಚಿದಂಬರಂ ಮೇಲೆ ಶೂ ಎಸೆತ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+