ಚುನಾವಣಾ ತರಬೇತಿ ಗೈರು, ಐವರು ಅಮಾನತು
ಬೆಂಗಳೂರು, ಏ. 9 : ಚುನಾವಣಾ ತರಬೇತಿ ಗೈರುಹಾಜರಾದ ಐದು ಮಂದಿ ಅಧಿಕಾರಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಆಗದಿರುವ ಜಿ ಎನ್ ನಾಯಕ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕೆ ಆರ್ ಪುರಂನಲ್ಲಿ ಚುನಾವಣೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಮಹತ್ವದ ತರಬೇತಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದು ಅಮಾನತಿಗೆ ಕಾರಣ ಎಂದು ನಾಯಕ್ ತಿಳಿಸಿದ್ದಾರೆ.
ಅಮಾನತುಗೊಂಡಿರುವ ಅಧಿಕಾರಿಗಳು
ಎಚ್ ಎಸ್ ರಾಧಾಕೃಷ್ಣ-ಸ್ಟಾಪ್ ಸೆಲೆಕ್ಷನ್ ಕಮಿಷನ್
ಚೈತ್ರಾ ಕವಿತಾ-ಫಾದರ್ ಮ್ಯಾಥ್ಯೊ ನರ್ಸಿಂಗ್ ಕಾಲೇಜಿನ ಸಹಾಯಕ ಉಪನ್ಯಾಸಕಿ
ಪಿ ಕೆ ಮುರಳೀಧರ್- ಟೆಕ್ನಿಕಲ್ ಆಫೀಸರ್, ಇಂಡಿಯನ್ ಇನ್ ಸ್ಟಿಟ್ಯೂಟ್ ಅಫ್ ಅಸ್ಟ್ರೋ ಫಿಸಿಕ್ಸ್
ಮಂಜುಳಾ- ಉಪನ್ಯಾಸಕಿ, ಫೇತ್ ಇನ್ ಸ್ಟಿಟ್ಯೂಟ್ ಅಫ್ ನರ್ಸಿಂಗ್ ಕಾಲೇಜ್
ಕೆ ಆರ್ ಬಸವಲಿಂಗಯ್ಯ-ಉಪನ್ಯಾಸಕ-ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications