ವರುಣ್ ಪ್ರಕರಣ, ಲಾಲು ವಿರುದ್ಧ ಎಫ್ಐಆರ್
ಪಾಟ್ನಾ, ಏ. 7 : ಉತ್ತರ ಪ್ರದೇಶದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಕೇಂದ್ರದ ಲಾಲು ಪ್ರಸಾದ ಯಾದವ್ ವಿರುದ್ದ ಎಫ್ ಐಆರ್ ದಾಖಲಿಸಲಾಗಿದೆ. ಕಿಶನ್ ಗಂಜ್ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳ ಆದೇಶದ ಮೇರೆಗೆ ಲಾಲು ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ನಾನು ಕೇಂದ್ರದ ಗೃಹ ಸಚಿನಾಗಿದ್ದರೆ ಮುಸ್ಲಿಂ ವಿರುದ್ದ ಹೇಳಿಕೆ ನೀಡಿರುವ ವರುಣ್ ಗಾಂಧಿ ಮೇಲೆ ರೋಲರ್ ಹತ್ತಿಸುತ್ತಿದ್ದೆ ಎಂಬ ಹೇಳಿಕೆಯನ್ನು ಕಿಶನ್ ಗಂಜ್ ನಲ್ಲಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರ ಕಾರ್ಯದಲ್ಲಿ ಲಾಲು ಗುಡುಗಿದ್ದರು. ಕಿಶನ್ ಗಂಜ್ ನಲ್ಲಿ ಆರ್ ಜೆಡಿ ಹಾಲಿ ಸಂಸದ ತಸ್ಲೀಮುದ್ದೀನ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಅವರು ಈ ಹೇಳಿಕೆ ನೀಡಿದ್ದರು.
2004ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರ ಪಡೆಯಲು ಕೋಮುವಾದಿ ಬಿಜೆಪಿ ನಡೆಸಿದ ಯತ್ನಗಳು ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿದೇಶಿ ಮೂಲವನ್ನು ದೊಡ್ಡ ಪ್ರಕರಣವಾಗಿಸಿದ್ದಕ್ಕೆ ತಾನು ಮತ್ತು ತನ್ನ ಪಕ್ಷ ಎಷ್ಟು ಹತಾಶೆಗೊಂಡಿತ್ತು ಎಂಬುದನ್ನು ಲಾಲು ನೆನೆಪಿಸಿಕೊಂಡಿದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ಲಾಲು, ಬಾಬ್ರಿ ಮಸೀದಿ ಧ್ವಂಸದಲ್ಲಿ ನೇರವಾಗಿ ಭಾಗಿಯಾಗಿರುವ ಅಡ್ವಾಣಿಯವರ ತೊಡೆಯ ಮೇಲೆ ನತೀಶ್ ಕುಳಿತುಕೊಂಡಿದ್ದಾರೆ ಲೇವಡಿ ಮಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications