ನಾಲ್ಕನೇ ರಂಗದ ತೆಕ್ಕೆಗೆ ಚಿರಂಜೀವಿ?

ಹೈದರಾಬಾದ್, ಏ. 7 : ಮಹತ್ವದ ಬೆಳವಣಿಗೆಯೊದರಲ್ಲಿ ಸಮಾಜವಾದಿ ಪಕ್ಷ ಮುಖಂಡ ಅಮರ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಹಾಗೂ ಬಾಲಿವುಡ್ ನಟ ಸಂಜಯ್ ದತ್ ಅವರು ಪ್ರಜಾರಾಜ್ಯಂ ಪಕ್ಷದ ಮುಖ್ಯಸ್ಥ ಚಿರಂಜೀವಿ ಅವರನ್ನು ಭೇಟಿ ಚರ್ಚೆ ನಡೆಸಿರುವುದು ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ತೃತೀಯ ರಂಗ ರಚನೆಯಿಂದ ಬಿಜೆಪಿ ನೇತೃತ್ವದ ಎನ್ ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದಲ್ಲಿ ನಡುಕು ಹುಟ್ಟಿರುವ ಬೆನ್ನಲ್ಲೇ ನಾಲ್ಕನೇ ರಂಗ ರಚನೆ ಮಾಡಿಕೊಂಡಿರುವ ಎಸ್ಪಿ, ಆರ್ ಜೆಡಿ ಮತ್ತು ಎಲ್ ಜೆಪಿ ಇದೀಗ ತನ್ನ ತೆಕ್ಕೆಗೆ ಪ್ರಜಾರಾಜ್ಯಂ ಸೆಳೆಯಲು ಭಾರಿ ಯತ್ನ ನಡೆಸಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಜಾರಾಜ್ಯ ಪಕ್ಷವನ್ನು ತನ್ನಡೆಗೆ ಸೆಳೆದುಕೊಂಡು ನಾಲ್ಕನೇ ರಂಗದೊಂದಿಗೆ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲು ಎಸ್ಪಿ ನಾಯಕರ ಕಸರತ್ತು ನಡೆಸಿದ್ದಾರೆ.

ಹೈದರಾಬಾದ್ ನ ಚಿರಂಜೀವಿ ನಿವಾಸಕ್ಕೆ ಭೇಟಿ ನೀಡಿ ಅಮರ್ ಸಿಂಗ್ ಮತ್ತು ಸಂಜಯ್ ದತ್ ಅವರು, ರಾಜ್ಯ ಮತ್ತು ರಾಷ್ಟ್ರ ರಾಜಕಾರಣ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಮರ್ ಸಿಂಗ್ ನಾಲ್ಕನೇ ರಂಗಕ್ಕೆ ಸೇರಲು ಪ್ರಜಾರಾಜ್ಯಂ ಮುಖಂಡ ಚಿರಂಜೀವಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+