ಏ.4ರಂದು ಬಾದಾಮಿ ಹೌಸ್ ನಲ್ಲಿ ತೇಜಸ್ವಿ ಸ್ಮರಣೆ
ಬೆಂಗಳೂರು,
ಏ. 2 : ಮೇಫ್ಲವರ್ ಮೀಡಿಯಾ ಹೌಸ್ ಹಾಗೂ ವಾರ್ತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಸಾಹಿತಿ, ಚಿಂತಕ ತೇಜಸ್ವಿ ಅವರ ನೆನಪಿಗಾಗಿ "ಮೂಡಿಗೆರೆಯ ಮಾಯಾವಿ" ಎಂಬ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಎದುರುಗಡೆ ಇರುವ ಬಾದಾಮಿ ಹೌಸ್ ನ ಪ್ರಿಯದರ್ಶಿನಿ ಸಭಾಂಗಣದಲ್ಲಿ ಏಪ್ರಿಲ್ 4 ರಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ. id="toptextpromo">ಖ್ಯಾತಿ
ಸಾಹಿತಿ, ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಅವರ ತೇಜಸ್ವಿ ಅವರೊಂದಿಗಿನ ಒಡನಾಟದ ಮೆಲುಕು ಹಾಕಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ತಾ ಇಲಾಖೆ ನಿರ್ದೇಶಕ ವಿಶು ಕುಮಾರ್ ವಹಿಸುವರು. ಕೃಪಾಕರ-ಸೇನಾನಿ ಅವರ ಡಾಕ್ಯುಮೆಂಟರಿ 'ಮಾಯಾಲೋಕ 'ಪ್ರದರ್ಶನಗೊಳ್ಳಲಿದೆ. ತೇಜಸ್ವಿ ಇಲ್ಲವಾಗಿ ಏಪ್ರಿಲ್ 5ಕ್ಕೆ ಎರಡು ವರ್ಷ ತುಂಬಲಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications