ಏ.4ರಂದು ಬಾದಾಮಿ ಹೌಸ್ ನಲ್ಲಿ ತೇಜಸ್ವಿ ಸ್ಮರಣೆ

KP Poornachandra Tejaswi
ಬೆಂಗಳೂರು, ಏ. 2 : ಮೇಫ್ಲವರ್ ಮೀಡಿಯಾ ಹೌಸ್ ಹಾಗೂ ವಾರ್ತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಸಾಹಿತಿ, ಚಿಂತಕ ತೇಜಸ್ವಿ ಅವರ ನೆನಪಿಗಾಗಿ "ಮೂಡಿಗೆರೆಯ ಮಾಯಾವಿ" ಎಂಬ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಎದುರುಗಡೆ ಇರುವ ಬಾದಾಮಿ ಹೌಸ್ ನ ಪ್ರಿಯದರ್ಶಿನಿ ಸಭಾಂಗಣದಲ್ಲಿ ಏಪ್ರಿಲ್ 4 ರಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಖ್ಯಾತಿ ಸಾಹಿತಿ, ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಅವರ ತೇಜಸ್ವಿ ಅವರೊಂದಿಗಿನ ಒಡನಾಟದ ಮೆಲುಕು ಹಾಕಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ತಾ ಇಲಾಖೆ ನಿರ್ದೇಶಕ ವಿಶು ಕುಮಾರ್ ವಹಿಸುವರು. ಕೃಪಾಕರ-ಸೇನಾನಿ ಅವರ ಡಾಕ್ಯುಮೆಂಟರಿ 'ಮಾಯಾಲೋಕ 'ಪ್ರದರ್ಶನಗೊಳ್ಳಲಿದೆ. ತೇಜಸ್ವಿ ಇಲ್ಲವಾಗಿ ಏಪ್ರಿಲ್ 5ಕ್ಕೆ ಎರಡು ವರ್ಷ ತುಂಬಲಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+