ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನರ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ: ಬಿಎಸ್ ವೈ
ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನಾಮಾವಶೇಷವಾಗಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪಕ್ಷವನ್ನು ಕೋಮುವಾದಿ ಎಂದು ಜರಿಯುತ್ತಿರುವ ಬಗ್ಗೆ ತಿರುಗೇಟು ನೀಡಿದ್ದಾರೆ.
ಹಿಂದು, ಮುಸ್ಲಿಂ, ಕ್ರೈಸ್ತರು ಒಂದಾಗಿ ಬಾಳಬೇಕು ಎನ್ನುವುದು ಕೋಮುವಾದವೆ? ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಕರೆದರೆ ಅದು ಇಡೀ ರಾಜ್ಯದ ಜನತೆಗೆ ಅವಮಾನ ಮಾಡಿದಂತಾಗುತ್ತದೆ ಎಂದರು. ಹಿಂದಿನ ಮುಖ್ಯಮಂತ್ರಿಯಂತೆ ತಾವು ಗ್ರಾಮವಾಸ್ತವ್ಯ ಎಂದು ಗ್ರಾಮಗಳಲ್ಲಿ ಮಧ್ಯ ರಾತ್ರಿ ಮಲಗಿ ಮುಂಜಾನೆ ಎದ್ದುಬರುವುದಿಲ್ಲ. ಜನಸ್ಪಂದನದ ಮೂಲಕ ಮನೆ ಮನೆಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುತ್ತಿದ್ದೇವೆ.
ಬಿಜೆಪಿ ಬಗ್ಗೆ ಜನತೆ ಇಟ್ಟಿರುವ ವಿಶ್ವಾಸಕ್ಕೆ, ನಂಬಿಕೆಗೆ ನಾವು ಯಾವತ್ತೂ ದ್ರೋಹ ಬಗೆಯುವುದಿಲ್ಲ, ರಕ್ತದಲ್ಲೂ ಬರೆದು ಕೊಡುತ್ತೇವೆ.ರಾಜ್ಯಾದ್ಯಂತ ಬಿಜೆಪಿ ಅಲೆ ಎದ್ದಿದೆ. ಸೋನಿಯಾಗಾಂಧಿ ಎದುರು ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಲು ಹೋಗಿದ್ದು ಹಾಸ್ಯಾಸ್ಪದ ಎಂದರು.
(ದಟ್ಸ್ ಕನ್ನಡ ವಾರ್ತೆ)
Story first published: Monday, March 30, 2009, 13:27 [IST]