ಸಮಾಜೋತ್ಸವಕ್ಕೆ ನೈತಿಕ ಬೆಂಬಲವಿದೆ: ಸಿ ಟಿ ರವಿ
ಬೆಂಗಳೂರು, ಮಾ.21: ಹಿಂದೂ ಸಮಾಜೋತ್ಸವಕ್ಕೆ ಬಿಜೆಪಿಯ ನೈತಿಕ ಬೆಂಬಲವಿದೆ. ಹಿಂದೂ ಸಮಾಜೋತ್ಸವಕ್ಕೆ ಪಾಲ್ಗೊಳ್ಳದೆ ಇನ್ನೇನು ತಾಲಿಬಾನೋತ್ಸವಕ್ಕೆ ಹೋಗಬೇಕೇ ಎಂದು ಬಿಜೆಪಿ ವಕ್ತಾರ ಸಿ.ಟಿ. ರವಿ ಹೇಳಿದ್ದಾರೆ.
ಇದು ಬಿಜೆಪಿಯ ಅಧಿಕೃತ ಕಾರ್ಯಕ್ರಮವಲ್ಲ. ಹಿಂದೂಪರ ಸಂಘಟನೆಗಳು ಸಮಾಜವನ್ನು ಜಾಗೃತಗೊಳಿಸಲು ಹಮ್ಮಿಕೊಂಡಿರುವ ಉತ್ಸವ. ಇದಕ್ಕೆ ನಾನಾ ಬಣ್ಣ ಕಟ್ಟಿ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಯಾವುದೇ ರಾಜಕೀಯ ಉದ್ದೇಶವಿಲ್ಲದೆ ನಡೆಯುತ್ತಿರುವ ಕಾರ್ಯಕ್ರಮವಾಗಿರುವುದರಿಂದ ಯಾರು ಬೇಕಾದರೂ ಹೋಗಬಹುದು. ವಿ ಎಸ್ ಆಚಾರ್ಯ ಮತ್ತು ಸದಾನಂದ ಗೌಡ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಲ್ಲಿ ಏನು ತಪ್ಪಿಲ್ಲ ಎಂದು ರವಿ ಹೇಳಿದ್ದಾರೆ.
ವೈ.ಎಸ್. ವಿ. ದತ್ತ ಅವರು ಜೆಡಿಎಸ್ ವಕ್ತಾರರಂತೆ ಕೆಲಸಮಾಡಬೇಕೇ ಹೊರತು ದೇವೇಗೌಡರ ಮನೆಯ ಭಟ್ಟಂಗಿಯಂತೆ ಕೆಲಸ ನಿರ್ವಹಿಸುವುದು ಸರಿಯಲ್ಲ ಎಂದು ಲೇವಡಿ ಮಾಡಿದ ರವಿ, ಆಪರೇಷನ್ ಕಮಲ ಟೀಕಿಸುತ್ತಿದ್ದ ಅಪ್ಪ - ಮಕ್ಕಳು ಈಗ ಯಾವ ಪಕ್ಷದ ಮುಖಂಡರನ್ನು ಪಕ್ಷಕ್ಕೆ ಕರೆತರಬೇಕೆಂದು ಕುತಂತ್ರ ರೂಪಿಸುತ್ತಿದ್ದಾರೆ ಎಂದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications