ಆಚಾರ್ಯ, ಪೇಜಾವರ ಶ್ರೀಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಗುರುವಾರ ರಾಜ್ಯ ಚುನಾವಣೆ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ವೈಎಸ್ ವಿ ದತ್ತಾ ಅವರು, ಈ ಎರಡು ಸಭೆಗಳು ಬಿಜೆಪಿಯೇ ಪರವಾಗಿಯೇ ನಡೆದಿರುವ ಸಮಾವೇಶಗಳಾಗಿವೆ. ಆದ್ದರಿಂದ ಚುನಾವಣಾ ಕಾನೂನುಗಳ ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು.
ಬೆಂಗಳೂರಿನಲ್ಲಿ ಮಾರ್ಚ್ 7 ರಂದು ಧರ್ಮ ಜಾಗೃತಿ ಸಭೆ ಹೆಸರಿನಲ್ಲಿ ನಡೆದ ಸಮಾವೇಶ ಪರೋಕ್ಷವಾಗಿ ಬಿಜೆಪಿ ಪ್ರಚಾರ ಸಭೆಯೇ ಆಗಿದೆ. ಇಲ್ಲಿ ಪೇಜಾವರ ಶ್ರೀಗಳು, ಗೃಹ ಸಚಿವ ವಿ ಎಸ್ ಆಚಾರ್ಯ, ಬಿಜೆಪಿ ರಾಜ್ಯಾದ್ಯಕ್ಷ ಸದಾನಂದಗೌಡ ಕರಾವಳಿ ಕಾರ್ಯಪಡೆ ಅಧ್ಯಕ್ಷ ನಾಗರಾಜ ಶೆಟ್ಟಿ, ಮಂಗಳೂರು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಸಚಿವ ಕೃಷ್ಣ ಪಾಲೇಮಾರ್, ಶಾಸಕ ಯೋಗೀಶ್ ಭಟ್ ಭಾಗವಹಿಸಿದ್ದರು. ಈ ಸಭೆ ಪಕ್ಕಾ ವೋಟ್ ಬ್ಯಾಂಕ್ ಸಭೆ ಆಗಿದ್ದು. ಈ ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದತ್ತಾ ಆಯೋಗವನ್ನು ಒತ್ತಾಯಿಸಿದರು.
(ದಟ್ಸ್ ಕನ್ನಡ ವಾರ್ತೆ)
ಹಿಂದೂ ಸಮಾಜೋತ್ಸವ ನಿಷೇಧಿಸಿ, ಜೆಡಿಎಸ್ ಆಗ್ರಹ











Click it and Unblock the Notifications