ಯಡಿಯೂರಪ್ಪ, ಅನಂತ್ ಕಳ್ಳ-ಮಳ್ಳ, ಎಚ್ಡಿಕೆ
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ ಎಂದರು. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ, ಜೆಡಿಎಸ್ ನಿಂದ ತಾವೇ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಗಿಳಿಯುವುದಾಗಿ ಹೇಳಿದರು. ಸತತ ನಾಲ್ಕು ಅವಧಿಗೆ ಬೆಂಗಳೂರು ಲೋಕಸಭೆ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿಯ ಅನಂತಕುಮಾರ್ ಕಡಿದು ಕಟ್ಟೆ ಹಾಕಿರುವುದು ಏನೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನಂತಕುಮಾರ್, ರಾಜ್ಯಕ್ಕೆ ಅದರಲ್ಲಿ ಮುಖ್ಯವಾಗಿ ಬೆಂಗಳೂರು ನಗರದ ಮೂಲಭೂತ ಸೌಕರ್ಯಗಳಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕಿತ್ತು. ಆದರೆ ಅಭಿವೃದ್ಧಿಯನ್ನು ಮರೆತ ಅನಂತಕುಮಾರ್ ಅಶೋಕ್ ಹೋಟೆಲ್ ನಲ್ಲಿ ವ್ಯರ್ಥವಾಗಿ ಸಮಯ ಕಳೆದರು ಎಂದು ದೂರಿದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅನಂತಕುಮಾರ್ ಅವರು ಯಡಿಯೂರಪ್ಪ ಮತ್ತು ನಾನು ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಹಕ್ಕ-ಬುಕ್ಕರು ಇದ್ದ ಹಾಗೆ ಎಂದು ಹೇಳಿಕೆ ನೀಡಿದ್ದಾರೆ. ಯಾವ ಘನ ಕಾರ್ಯ ಮಾಡಿದ್ದಾರೆ ಎಂದು ಈ ಇಬ್ಬರು ಹಕ್ಕ-ಬುಕ್ಕರಾಗಲು ಸಾಧ್ಯ ಎಂದು ಆಕ್ಷೇಪಿಸಿದ ಅವರು, ಈ ಇಬ್ಬರು ನಾಯಕರು ಹಕ್ಕ-ಬುಕ್ಕರಲ್ಲ, ಕಳ್ಳ-ಮಳ್ಳರು ಎಂದು ಲೇವಡಿ ಮಾಡಿದರು.
(ದಟ್ಸ್
ಕನ್ನಡ
ವಾರ್ತೆ)
ಅಶೋಕ್
ಖೇಣಿ
ವಿರುದ್ಧ
ದೇವೇಗೌಡ
ಸ್ಪರ್ಧೆ!
ಅನಂತ್
ವಿರುದ್ಧ
ಎಚ್ಡಿಕೆ
ಸ್ಪರ್ಧೆ
ಸಂಭವ?