ಮಾಯಾವತಿ ಪಿಎಂ ಆಗಲು ಅಭ್ಯಂತರವಿಲ್ಲ, ಎಚ್ಡಿಕೆ

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಯಾವತಿ ಅವರು ಪ್ರಧಾನಮಂತ್ರಿಯಾಗಲು ನಮ್ಮದೇನೂ ಅಭ್ಯಂತರವಿಲ್ಲ ಎಂದರು. ಕುಮಾರಸ್ವಾಮಿ ಅವರ ಹೇಳಿಕೆ ಪಕ್ಷದ ಅಧಿಕೃತ ನಿರ್ಧಾರವೋ ಅಥವಾ ವೈಯಕ್ತಿಕ ಹೇಳಿಕೆಯೋ ಸ್ಪಷ್ಟವಾಗಿಲ್ಲ. ಏಕೆಂದರೆ, ತೃತೀಯ ರಂಗದ ಮುಖ್ಯಸ್ಥರಾಗಲು ಎಚ್ ಡಿ ದೇವೇಗೌಡ ಶತಪ್ರಯತ್ನ ಮಾಡುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಅವಕಾಶ ಸಿಕ್ಕರೆ ಇನ್ನೊಂದು ಬಾರಿ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲು ತಯಾರಿ ನಡೆಸಿದ್ದಾರೆ.
ಆದರೆ, ಇಂದು ಕುಮಾರಸ್ವಾಮಿಯ ಈ ಹೇಳಿಕೆ ಜೆಡಿಎಸ್ ಪಾಳೆಯದಲ್ಲಿ ಅನೇಕ ಗೊಂದಲ ಹುಟ್ಟು ಹಾಕುವ ಸಾಧ್ಯತೆಗಳಿವೆ. ಕೊನೆಯಲ್ಲಿ ನಾನು ಹಾಗೆ ಹೇಳಿಯೇ ಇಲ್ಲ. ಮಾಧ್ಯಮಗಳು ತಪ್ಪಾಗಿ ಅರ್ಥೈಸಿ ವರದಿ ಮಾಡಿವೆ ಎಂದು ಕುಮಾರಸ್ವಾಮಿ ಹೇಳಬಹುದೇನೂ ?
(ದಟ್ಸ್ ಕನ್ನಡ ವಾರ್ತೆ)
ನನ್ನನ್ನು ಪಿಎಂ ಅಭ್ಯರ್ಥಿ ಎಂದು ಘೋಷಿಸಿ: ಮಾಯಾ











Click it and Unblock the Notifications