ಯಡಿಯೂರಪ್ಪ ವಿರುದ್ಧ ಅನಂತ್ ಕುಮಾರ್ ಆಕ್ರೋಶ

ಸಂಸದ ಮಲ್ಲಿಕಾರ್ಜುನಯ್ಯ, ಪಕ್ಷದ ರಾಜ್ಯದ ಘಟಕದ ಮಾಜಿ ಅಧ್ಯಕ್ಷ ಬಿ ಬಿ ಶಿವಪ್ಪ, ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಂಡಾಯ ಎದ್ದಿರುವುದು ಹಾಗೂ ಟಿಕೆಟ್ ಹಂಚಿಕೆಯಿಂದಾಗಿ ಸಂಸದ ಅನಂತಕುಮಾರ್ ಮುನಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಆರ್ಎಸ್ಎಸ್ ಮುಖಂಡರಾದ ಕೆ ನರಹರಿ, ಮೈ ಚ ಜಯದೇವ್ ಅವರು ಕೇಶವಕೃಪಾದಲ್ಲಿ ಸಂಧಾನ ಸಭೆ ನಡೆಸಿದರೂ ಯಾವುದೇ ಇತ್ಯರ್ಥಕ್ಕೆ ಬರಲು ಸಾಧ್ಯವಾಗಲಿಲ್ಲ.
ಟಿಕೆಟ್ ಹಂಚಿಕೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕ, ಅಪರೇಷನ್ ಕಮಲ ಮೂಲಕ ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಸೇರಿದಂತೆ ಯಡಿಯೂರಪ್ಪ ವಿರುದ್ಧ ಅನಂತ್ ಕುಮಾರ್ ಆರೋಪ ಪಟ್ಟಿ ಮಾಡುವ ಮೂಲಕ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದ ಯಡಿಯೂರಪ್ಪ, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಅನಂತ್ ಕುಮಾರ್ ಕಿಡಿಕಾರಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications