ಒರಿಸ್ಸಾ, ಇಂದು ನವೀನ್ ಪಟ್ನಾಯಕ್ ಹಣೆಬರಹ

ಕಳೆದ ಮಾರ್ಚ್ 11 ರಂದು ಬಿಜೆಪಿ ಹಾಗೂ ಬಿಜೆಡಿ ಮೈತ್ರಿ ಮುರಿದು ಬಿದ್ದ ನಂತರ ಒರಿಸ್ಸಾದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗೆ ನಡೆಯತೊಡಗಿವೆ. ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂದಕ್ಕೆ ಪಡೆದಿದ್ದರಿಂದ ಮಾರ್ಚ್ 11 ರಂದು ಸದನದಲ್ಲಿ ವಿಶ್ವಾಸ ಮತ ಯಾಚಿಸುವಂತೆ ರಾಜ್ಯಪಾಲ ಎಂ ಸಿ ಭಂಡಾರೆ ಅವರು ನವೀನ ಪಟ್ನಾಯಕ್ ಅವರಿಗೆ ಸೂಟನೆ ನೀಡಿದ್ದಾರೆ. ಇದರಿಂದ ಇಂದು ಸದನದಲ್ಲಿ ವಿಶ್ವಾಸ ಮತ ಕಾರ್ಯಕ್ರಮ ನಡೆಯಲಿದೆ. ಬಿಜೆಡಿ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಆ ಮಧ್ಯೆ ಕೆಲ ಬಿಜೆಡಿ ಶಾಸಕರು ವಿಪ್ ಉಲ್ಲಂಘಿಸಿ ಸರ್ಕಾರದ ವಿರುದ್ಧ ಮತ ಚಲಾಯಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ವಿಶ್ವಾಸಮತ ಕಾರ್ಯಕ್ರಮದಿಂದ ದೂರು ಉಳಿಯುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications