ಹೊಸ ಹೊರಗುತ್ತಿಗೆ ಯೋಜನೆ ಸಿಗುತ್ತಿಲ್ಲ, ಇನ್ಫೋಸಿಸ್
ಬೆಂಗಳೂರು, ಮಾ. 6 : ಹಣಕಾಸು ಕ್ಷೇತ್ರದ ಮೇಲೆ ಬಿದ್ದಿರುವ ಭಾರಿ ಹೊಡತದಿಂದ ಜಾಗತಿಕ ಮಾರುಕಟ್ಟೆಯ ಸೇವೆ ವಲಯ ತೀವ್ರ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೇವಾ ವಲಯದ ಕಂಪನಿಗಳು ನೂತನ ಹೊರಗುತ್ತಿಗೆಗಳ ಕೊರತೆಯನ್ನು ಅನುಭವಿಸುವಂತಾಗಿದೆ ಎಂದು ಇನ್ ಫೋಸಿಸ್ ಕಂಪನಿಯ ಹಣಕಾಸು ವಿಭಾಗದ ಮುಖ್ಯಸ್ಥ ವಿ ಬಾಲಕೃಷ್ಣ ಹೇಳಿದರು.
ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲ ದೇಶಗಳ ಸೇವಾ ವಲಯದ ಕಂಪನಿಗಳಿಗೆ ಆರ್ಥಿಕ ಕುಸಿತದಿಂದ ತುಂಬಲಾರದ ನಷ್ಟ ಉಂಟು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪ್ರಯತ್ನಲಾಗುತ್ತಿದೆ, ತಕ್ಕ ಮಟ್ಟಿಗೆ ಚೇತರಿಕೆಯನ್ನು ಕಂಡಿದೆ. ಶೀಘ್ರದಲ್ಲಿ ಇದರಿಂದ ಹೊರಬರುವ ಸಾಧ್ಯತೆಗಳಿವೆ ಎಂದು ಬಾಲಕೃಷ್ಣ ವಿಶ್ವಾಸದಿಂದ ಹೇಳಿದರು. ಇದಕ್ಕೂ ಮುನ್ನ ಇನ್ ಪೋಸಿಸ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲ್ ಕೃಷ್ಣ ಕೂಡ ಇದೇ ಮಾತನ್ನು ಹೇಳಿದ್ದು, ಹೊರಗುತ್ತಿಗೆ ಪ್ರಮಾಣ ಕಡಿಮೆ ಆಗಿದ್ದನ್ನು ಅವರು ಸ್ಪಷ್ಟಪಡಿಸಿದ್ದರು. ಆರ್ಥಿಕ ಕುಸಿತದಿಂದ ಸ್ವಲ್ಪ ಮಟ್ಟಿಗೆ ಸಾಫ್ಟವೇರ್ ಉದ್ಯಮ ಕುಂಠಿತ ಕಂಡಿದೆ ಎಂದು ಹೇಳಿದ್ದರು.
(ದಟ್ಸ್ ಕನ್ನಡ ವಾರ್ತೆ)
ಸತ್ಯಂ ಖರೀದಿಸಲು ಐಬಿಎಂ ಕಂಪನಿ ಒಲವು












Click it and Unblock the Notifications