ಪಾಕ್ ಆಟಗಾರರು, ಕಲಾವಿದರಿಗೆ ಬಹಿಷ್ಕಾರ

ಕಲಾವಿದರು ಹಾಗೂ ಆಟಗಾರರ ಭಾರತ ಪ್ರವೇಶ ನಿರ್ಬಂಧಿಸಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಒಂದು ವೇಳೆ ಪಾಕ್ ಕಲಾವಿದರು ಹಾಗೂ ಆಟಗಾರರು ತಮ್ಮ ಎಚ್ಚರಿಕೆ ಮೀರಿ ಭಾರತವನ್ನು ಪ್ರವೇಶಿಸಿದರೆ ಅವರಿಗೆ ಬಹಿಷ್ಕಾರ ಹಾಕುವುದಾಗಿ ತಿಳಿಸಿದರು. ಪಾಕ್ ಕಲಾವಿದರು ನೀಡುವ ಕಾರ್ಯಕ್ರಮ ಹಾಗೂ ಪಾಕ್ ಆಟಗಾರರು ಆಡುವ ಸ್ಥಳಗಳಿಗೆ ತೆರಳಿ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.
ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕ್ ಜೊತೆಗಿನ ರಾಜತಾಂತ್ರಿಕ ಸಂಬಂಧ ಸೇರಿದಂತೆ ಎಲ್ಲ ಬಗೆಯ ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕು ಎಂದರು. ಉಗ್ರಗಾಮಿಗಳ ತಾಣವಾಗಿರುವ ಪಾಕ್ ನಿಂದ ರಾಯಭಾರಿಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಶ್ರೀಲಂಕಾ ಆಟಗಾರರ ಮೇಲಿನ ದಾಳಿ ಪಾಕ್ ಸರ್ಕಾರದ ಪ್ರಾಯೋಜಿತ ದಾಳಿ ಎಂದು ಬಣ್ಣಿಸಿದ ಅವರು, ಈ ಘಟನೆ ಪಾಕ್ ಭಯೋತ್ಪಾದಕರ ತಾಣ ಎಂಬುದನ್ನು ಸಾಬೀತುಪಡಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಲಾಹೋರ್ ದಾಳಿ, ಆರೋಪ ನಿರಾಕರಿಸಿದ ಭಾರತ












Click it and Unblock the Notifications