ರಕ್ತ ಸಂಬಂಧಿಗಳ ಮದುವೆ, ಕಿವುಡು ಸಂತಾನ
ಮೈಸೂರು, ಮಾ. 5: ತುಂಬಾ ಹತ್ತಿರದ ರಕ್ತ ಸಂಬಂಧಿಗಳ ನಡುವೆ ಮದುವೆ ಆಗುವುದರಿಂದ ಕಿವುಡ ಮತ್ತು ಮೂಕ ಮಕ್ಕಳು ಹುಟ್ಟಲು ಪ್ರಮುಖ ಕಾರಣವಾಗಿದೆ ಎಂದು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮುಖ್ಯಸ್ಥೆ ಡಾ: ವಿಜಯಲಕ್ಷ್ಮೀ ಅವರು ಸ್ಪಷ್ಟಪಡಿಸಿದ್ದಾರೆ.
ಅವರು ಇತ್ತೀಚೆಗೆ ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾಲಯ (ಡಿಎಫ್ಆರ್ಎಲ್)ನಲ್ಲಿ ರೋಲ್ ಆಫ್ ಕಮ್ಯುನಿಟಿ ಇನ್ ದಿ ಪ್ರಿವೆನ್ಷನ್ ಆಫ್ ಕಮ್ಯುನಿಕೇಷನ್ ಡಿಸ್ಆರ್ಡರ್ ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಡಾ. ಟಿ.ಎಸ್. ವಸುಂಧರಾ ಮೆಮೋರಿಯಲ್ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪೋಷಕರು ಮಕ್ಕಳು ಚಿಕ್ಕವರಿರುವಾಗಲೇ ಅವರಲ್ಲಿ ನ್ಯೂನತೆಗಳನ್ನು ಪತ್ತೆ ಹಚ್ಚಿ ಉತ್ತಮ ಚಿಕಿತ್ಸೆ ದೊರಕಿಸುವಂತೆ ಪೋಷಕರಿಗೆ ಕರೆಯಿತ್ತರು. ಎಫ್ಆರ್ಎಲ್. ನ ನಿರ್ದೇಶಕ ಡಾ. ಎ ಎಸ್ ಬಾವಾ ಉಪಸ್ಥಿತರಿದ್ದರು.
ಜೀವ ವಿಜ್ಞಾನ ಸಮೂಹದಲ್ಲಿ ಕಲ್ಪನ ಶ್ರೀವಾತ್ಸವ ಅವರು ಮಂಡಿಸಿದ ಕೋಬಾಲ್ಟ್ ಸಪ್ಲಿಮೆಂಟೇಷನ್ ಪ್ರೋಮೋಟ್ಸ್ ಹೈಪಾಕ್ಸಿಕ್ ಟಾಲರೆನ್ಸ್ ಅಂಡ್ ಫೆಸಿಲಿಟೀಸ್ ಅಕ್ಲಿಮೈಜೇಷನ್ ಟು ಹೈಪೋಬ್ರ್ಯಾಂಕ್ ಇನ್ ರ್ಯಾಟ್ ಬ್ರೈನ್[cobalt supplementation promotes hair poxic tolerance and facilities oglimizatin to hypo inherent brain] ಎಂಬ ಪ್ರಬಂಧಕ್ಕೆ ಡಾ. ವಸುಂಧರಾ ಮೊಮೋರಿಯಲ್ ಬೆಸ್ಟ್ ರಿಸರ್ಚ್ ಪೆಪರ್ ಪ್ರಶಸ್ತಿ ಲಭಿಸಿತು.
(ದಟ್ಸ್ ಕನ್ನಡವಾರ್ತೆ)











Click it and Unblock the Notifications