ಡಿಕೆಶಿ, ತೇಜಸ್ವಿನಿ ವಾಕ್ಸಮರಕ್ಕೆ ಖರ್ಗೆ ಅಸಮಾಧಾನ

ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ನಡುವಿನ ವಿರಸ ಬೀದಿ ರಂಪಾವಾಗುತ್ತಿರುವುದು ಬೇಸರದ ಸಂಗತಿ. ಇದನ್ನು ಪಕ್ಷದ ಹೈಕಮಾಂಜ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಪರೇಷನ್ ಕಮಲಕ್ಕೆ ಡಿಕೆ ಶಿವಕುಮಾರ್ ಅವರೆ ನೇರ ಕಾರಣ ಎಂದು ಸಂಸದೆ ತೇಜಸ್ವಿನಿಗೌಡ ಆರೋಪಿಸಿರುವುದು. ಪ್ರತಿಯಾಗಿ ಡಿಕೆಶಿ ಅವರು ತೇಜಸ್ವಿನಿ ಅವರಿಗೆ ಮೆಂಟಲ್ ಎಂಬ ಪದ ಬಳಕೆ ಮಾಡಿರುವುದನ್ನು ಪಕ್ಷದ ವರಿಷ್ಠರು ಗಮನಕ್ಕೆ ಬಂದಿದೆ ಎಂದು ಹೇಳಿದರು.
ಪಕ್ಷದಲ್ಲಿ ಸಣ್ಣಪುಟ್ಟ ಮನಸ್ತಾಪಗಳು, ವಿರಸಗಳು ಇರುವುದು ಸಹಜ. ಈ ಇಬ್ಬರು ನಾಯಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ಸಲ್ಲಿಸಲಾಗುವುದು ಮುಂದಿನ ಕ್ರಮವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಖರ್ಗೆ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ತೇಜಸ್ವಿನಿಗೌಡ ಆರೋಪಕ್ಕೆ ಡಿಕೆಶಿ ಕಿಡಿ ಕಿಡಿ











Click it and Unblock the Notifications