ಬಿಜೆಪಿ 2ನೇ ಪಟ್ಟಿ ಪ್ರಕಟ, ರಾಘು ಸ್ಪರ್ಧೆ

ಅಲ್ಲದೇ, ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಪುತ್ರ ಶಿವಕುಮಾರ್ ಉದಾಸಿ, ಆರೋಗ್ಯ ಸಚಿವ ಆರ್ ಶ್ರೀರಾಮುಲು ಸಹೋದರಿ ಜೆ ಶಾಂತಮ್ಮ ಹಾಗೂ ಪೌರಾಡಳಿತ ಸಚಿವ ಉಮೇಶ ಕತ್ತಿ ಸಹೋದರ ರಮೇಶ್ ಕತ್ತಿ ಅವರು ಚಿಕ್ಕೋಡಿಯಿಂದ ಸ್ಪರ್ಧಸಲಿದ್ದಾರೆ ಎನ್ನುವುದು ವಿಶೇಷ. ಈ ಮೂಲಕ ಬಿಜೆಪಿ ಕೂಡ ಕುಟುಂಬ ರಾಜಕಾರಣದಿಂದ ಹೊರತಲ್ಲ ಎನ್ನುವುದು ಸಾಬೀತಾಗಿದೆ.
* ಶಿವಮೊಗ್ಗ - ರಾಘವೇಂದ್ರ (ಸಿಎಂ ಪುತ್ರ)
* ರಾಯಚೂರು - ರಾಜಾ ಅಮರೇಶ ನಾಯಕ್
* ಬೀದರ್ - ಗುರುಪಾದಪ್ಪ ನಾಗಮಾರಪಲ್ಲಿ
* ತುಮಕೂರು - ಜಿ ಎಸ್ ಬಸವರಾಜು
* ದಕ್ಷಿಣ ಕನ್ನಡ - ನಳಿನ್ ಕುಮಾರ್ ಕಟೀಲು
* ಗುಲ್ಬರ್ಗಾ - ರೇವು ನಾಯಕ ಬೆಳಮಗಿ
* ಚಾಮರಾಜನಗರ - ಎ ಆರ್ ಕೃಷ್ಣಮೂರ್ತಿ
* ಬಳ್ಳಾರಿ - ಜೆ ಶಾಂತಿ (ಸಚಿವ ಶ್ರೀರಾಮುಲು ಸಹೋದರಿ)
* ಕೊಪ್ಪಳ - ಶಿವರಾಮಗೌಡ
* ಹಾವೇರಿ - ಶಿವಕುಮಾರ್ ಉದಾಸಿ
* ಚಿಕ್ಕೋಡಿ - ರಮೇಶ್ ಕತ್ತಿ
(ದಟ್ಸ್ ಕನ್ನಡ ವಾರ್ತೆ)
ಗೌಡ್ರನ್ನ ಅದ್ಯಾವ ಬಾಯಲ್ಲಿ ಬೈತೀರಾ ಬಿಎಸ್ ವೈ?
ಸಿಎಂ ಮಗನಿಗೆ ಟಿಕೆಟ್, ಭುಗಿಲೆದ್ದ ಅಸಮಾಧಾನ











Click it and Unblock the Notifications