ಪ್ರಜ್ಞಾವಂತರಿಂದ 'ಬಿಜೆಪಿ ಮಿತ್ರ' ಮಂಡಳಿ ಸ್ಥಾಪನೆ
ಮುಂಬೈ, ಮಾ. 4 : ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಮಾತ್ರವಲ್ಲ ರಾಜಕೀಯೇತರ ಸಂಘಟನೆಗಳು ಚುರುಕಾಗುತ್ತಿವೆ. ಕೇಂದ್ರದಲ್ಲಿ ಬಿಜೆಪಿ ಮಾತ್ರ ಅತ್ಯುತ್ತಮ ಸರ್ಕಾರ ರಚಿಸಬಲ್ಲದು ಎಂದು ನಂಬಿರುವ ವೃತ್ತಿಪರರು, ಉದ್ಯಮಿಗಳು ಮತ್ತು ಯುವ ನಾಗರಿಕರು ರಚಿಸಿರುವ ತಂಡ 'ಬಿಜೆಪಿ ಮಿತ್ರರು' ಎಂಬ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ.
ಪ್ರಭಾದೇವಿಯಲ್ಲಿರುವ ರವೀಂದ್ರ ನಾಟ್ಯ ಮಂದಿರದಲ್ಲಿ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಉದ್ಘಾಟಿಸಿದರು. ಸುಮಾರು 1500 ಜನರಿರುವ ಸಂಘಟನೆಯಲ್ಲಿರುವವರು ಯಾರೂ ಬಿಜೆಪಿ ಸದಸ್ಯರಲ್ಲ. ಆದರೆ, ಬಿಜೆಪಿ ಬಗ್ಗೆ ಒಲವು ಹೊಂದಿರುವವರು. ಸಂಘಟನೆಯ ಕಾರ್ಯಕರ್ತರು ಮುಂಬೈ ಮಾತ್ರವಲ್ಲ ಪುಣೆಯಲ್ಲಿಯೂ ಸಭೆ ಸೇರಿತು.
ಹೊಸದಾಗಿ ಪ್ರಾರಂಭಿಸಿರುವ www.friendsofbjp.org ಅಂತರ್ಜಾಲ ತಾಣ ಮತ್ತು ಎಸ್ಎಮ್ಎಸ್ ಮುಖಾಂತರ ಜನತೆಯನ್ನು ಸಂಪರ್ಕಿಸಲು ತೀರ್ಮಾನಿಸಿದೆ. ಮತ ಚಲಾವಣೆಯ ಬಗ್ಗೆ ಜನರಲ್ಲಿರುವ ಉದಾಸೀನತೆಯನ್ನು ಹೊಡದೋಡಿಸಿ ಎಚ್ಚರಿಕೆ ಮೂಡಿಸುವುದು ಬಿಜೆಪಿ ಮಿತ್ರ ಸಂಘಟನೆಯ ಮೂಲ ಉದ್ದೇಶ. ಅಂತರ್ಜಾಲ ತಾಣದಲ್ಲಿ ಕಾಂಗ್ರೆಸ್ ವಿರುದ್ಧ ಈ ಸಂಘಟನೆ ಹರಿಹಾಯ್ದಿದೆ.
ಈ ಸಂಘಟನೆಯ ಹುಟ್ಟು ಮೊಳೆತಿದ್ದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುಂಬೈ ಮತ್ತು ನ್ಯೂಯಾರ್ಕ್ ಕೋಲಂಬಿಯಾ ವಿಶ್ವವಿದ್ಯಾಲಯದ ಪದವೀಧರರಾಗಿರುವ 42ರ ಹರೆಯದ ರಾಜೇಶ್ ಜೈನ್ ಎಂಬುವವರಲ್ಲಿ. "ಇಷ್ಟು ದಿನ ಬಿಜೆಪಿಯ ಮೂಕ ಬೆಂಬಲಿಗರಾಗಿದ್ದೆವು. ಆದರೆ, ಈ ಚುನಾವಣೆಯಲ್ಲಿ ಬೇರೇನನ್ನಾದರೂ ಮಾಡಲೇಬೇಕು ಎಂಬ ಉದ್ದೇಶದಿಂದ ಈ ಸಂಘಟನೆ ಹುಟ್ಟುಹಾಕಿದ್ದೇವೆ" ಎನ್ನುತ್ತಾರೆ ರಾಜೇಶ್.
"ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದು ಮಾತ್ರವಲ್ಲ, ಅಗತ್ಯ ಬಿದ್ದರೆ ಯಾವುದೇ ಸರ್ಕಾರದ ವಿರುದ್ಧ ದನಿ ಎತ್ತಲು ಸಿದ್ಧರಾಗಿದ್ದೇವೆ" ಎಂದು ಬಿಜೆಪಿ ಮಿತ್ರ ಸಂಘಟನೆಯ ಕಾರ್ಯಕರ್ತರೊಬ್ಬರು











Click it and Unblock the Notifications