ವಿಕ ವರದಿ ಬಗ್ಗೆ ಡಿಸಿ ಮಣಿವಣ್ಣನ್ ಸ್ಪಷ್ಟೀಕರಣ
ಮೈಸೂರು, ಮಾ.1:"ಡಿಸಿಗೂ ಬರಲಿದೆ, ಬೆಂಗಾವಲು ವಾಹನ"ಎಂಬ ತಲೆ ಬರಹದಡಿ, ದಿನಾಂಕ 28.2.2009 ರ ಮೈಸೂರಿನಿಂದ ಪ್ರಕಟವಾಗುವ ವಿಜಯ ಕರ್ನಾಟಕ' ದಿನ ಪತ್ರಿಕೆಯ ಪುಟ-2ರಲ್ಲಿ ಜಿಲ್ಲಾಧಿಕಾರಿಗಳಿಗೆ ಬೆಂಗಾವಲು ವಾಹನ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಿಸಿ ಟಿವಿ ಅಳವಡಿಸಿರುವ ಬಗ್ಗೆ ವರದಿಯಾಗಿದೆ. ಸದರಿ ವರದಿಯಲ್ಲಿನ ಸಂಗತಿಗಳು ನಿರಾಧಾರವೆಂದು ಮೈಸೂರು ಜಿಲ್ಲಾಧಿಕಾರಿ ಪಿ. ಮಣಿವಣ್ಣನ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ 'ಬೆಂಗಾವಲು ವಾಹನ' ಅಥವಾ ಹೆಚ್ಚಿನ ಭದ್ರತೆ ಬಗ್ಗೆ ಈ ಕಛೇರಿಯಿಂದ ಯಾರಿಗೂ ಕೋರಿಕೆಯನ್ನು ಸಲ್ಲಿಸಿರುವುದಿಲ್ಲ ಮತ್ತು ವರದಿಯಲ್ಲಿನ ಅಂಶಗಳ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ಯಾವುದೇ ದಿನಪತ್ರಿಕೆಗಳಿಗೆ ಮಾಹಿತಿ ನೀಡಿರುವುದಿಲ್ಲ. ಲೋಕಸಭೆಗೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಿದಲ್ಲಿ, ಅದೊಂದು ಅಗತ್ಯ ಆಡಳಿತಾತ್ಮಕ ಕ್ರಮವೇ ಆಗುತ್ತದೆ.
ಪಾರದರ್ಶಕೆತೆಯ ದೃಷ್ಠಿಯಿಂದ ಪ್ರಾಯೋಗಿಕವಾಗಿ ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ಸಿಸಿಟಿವಿಯನ್ನು ಇತ್ತೀಚಿಗಷ್ಟೇ ಅಳವಡಿಸಲಾಗಿದೆ. ಇದರ ಉಪಯುಕ್ತತೆಯನ್ನು ಆಧರಿಸಿ, ಜಿಲ್ಲಾಧಿಕಾರಿಗಳ ಕಛೇರಿಯ ಇತರ ಶಾಖೆಗಳಲ್ಲೂ ಸಿಸಿಟಿವಿ ಯನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಈ ಕ್ರಮವು ಪಾರದರ್ಶಕತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಲಾಗಿದ್ದು, ಪತ್ರಿಕೆಯಲ್ಲಿ ವರದಿಯಾಗಿರುವಂತೆ ಯಾವುದೇ ಬೆದರಿಕೆ' ಕಾರಣದಿಂದ ಸಿಸಿಟಿವಿ ಅಳವಡಿಸಿರುವುದಿಲ್ಲವೆಂಬ ಅಂಶವನ್ನು ಈ ಮೂಲಕ ಸಾರ್ವಜನಿಕರ ಮಾಹಿತಿಗಾಗಿ ಸ್ಪಷ್ಟೀಕರಣ ನೀಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಪಿ. ಮಣಿವಣ್ಣನ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮೈಸೂರು ಜಿಲ್ಲೆಯಲ್ಲಿ ಶೇ. 89 ರಷ್ಟು ಪ್ರಗತಿ, ಮರಿಗೌಡ












Click it and Unblock the Notifications