ಶ್ರೀರಾಮಸೇನೆ ಕಾರ್ಯಕರ್ತರಿಗೆ ಗಡಿಪಾರು
ಮಂಗಳೂರು, ಮಾ.1: ನಗರದ ಅಮ್ನೇಶಿಯ ಪಬ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಮಂಗಳೂರು ಉಪವಿಭಾಗೀಯ ನ್ಯಾಯಾಲಯ ಶ್ರೀರಾಮಸೇನೆಯ ಕಾರ್ಯಕರ್ತರಾದ ಜಗದೀಶ್ ಮತ್ತು ಲೋಕೇಶ್ಗೆ ತಕ್ಷಣದಿಂದ ಜಾರಿಗೆ ಬರುವಂತೆ ಮೂರು ತಿಂಗಳ ಕಾಲ ಮಂಗಳೂರು ತಾಲೂಕು ವ್ಯಾಪ್ತಿಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದೆ.
ಪಬ್ ದಾಳಿಯ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಸಂಚಾಲಕ ಪ್ರಸಾದ್ ಅತ್ತಾವರ ಮತ್ತು ಕಾರ್ಯಕರ್ತರಾದ ಸುಭಾಷ್ ಪಡೀಲ್, ಜಗದೀಶ್ ,ಲೋಕೇಶ್ ಹಾಗೂ ಅಶೋಕ್ ಅನ್ನುವವರಿಗೆ ಜಿಲ್ಲಾ ಉಪವಿಭಾಗಾಧಿಕಾರಿ 'ನಿಮ್ಮನ್ನು ಗಡಿಪಾರು ಯಾಕೆ ಮಾಡಬಾರದು' ಎಂದು ಪ್ರಶ್ನಿಸಿ ಫೆ.19ರಂದು ನೋಟಿಸ್ ಜಾರಿ ಮಾಡಿತ್ತು ಅಲ್ಲದೆ ಫೆ. 24ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಿದ್ದರು. ಆರೋಪಿಗಳ ಪರ ವಕೀಲರು ಸಮಯಾವಕಾಶ ಕೋರಿದ್ದರಿ೦ದ ವಿಚಾರಣೆ ಫೆ.27 ಕ್ಕೆ ಮುಂದೂಡಲ್ಪಟ್ಟಿತ್ತು.
ಪ್ರಸಾದ್ ಅತ್ತಾವರ, ಸುಭಾಷ್ ಪಡೀಲ್ ಹಾಗೂ ಅಶೋಕ್ ಗಡಿಪಾರು ನೋಟಿಸ್ಗೆ ಸದ್ಯಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದು ಏ.29ರ ಒಳಗೆ ಸಂಬಂಧ ಪಟ್ಟ ದಾಖಲೆ ಒದಗಿಸುವಂತೆ ಆದೇಶ ನೀಡಿದೆ. ಈ ಮಧ್ಯೆ ಅಮ್ನೇಶಿಯ ಪಬ್ ನ ಪರವಾನಿಗಿಯನ್ನು ರದ್ದು ಮಾಡಲಾಗಿದ್ದು, ಮದ್ಯವನ್ನು ಲಾಡ್ಜ್ ನಲ್ಲಿರುವ ಗ್ರಾಹಕರಿಗೆ ಮಾತ್ರ ಪೂರೈಕೆ ಮಾಡಬೇಕು , ಹೊರಗಡೆಯ ಗ್ರಾಹಕರಿಗೆ ನೀಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಮಂಗಳೂರಿನಲ್ಲಿ ಪಬ್ ಸಂಸ್ಕೃತಿ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆದ ದಾಳಿ ಅತ್ಯಂತ ಖಂಡನೀಯ ಎಂದು ಶನಿವಾರ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
(ಏಜೆನ್ಸೀಸ್)
ಮಂಗಳೂರು ಪಬ್ ದಾಳಿ ಖಂಡನೀಯ:ಅಡ್ವಾಣಿ
ಮಹಿಳಾ ಆಯೋಗದಿಂದ ನಿರ್ಮಲಾ ವಜಾ












Click it and Unblock the Notifications