ಅಯೋಧ್ಯಯಲ್ಲಿ ಮಂದಿರ ನಿರ್ಮಾಣ ಶತಸಿದ್ಧ

ಗೋರಖಪುರ, ಫೆ. 16 : ರಥಯಾತ್ರೆ ಮತ್ತು ಅಯೋಧ್ಯ ವಿಚಾರದಿಂದಲೇ ಅಧಿಕಾರಕ್ಕೆ ಬಂದ ನಾವು ಅದನ್ನು ಮರೆತಿಲ್ಲ, ಈ ಬಾರಿಯ ಚುನಾವಣೆಯಲ್ಲಿ ನಾವು ಗೆದ್ದು ಸರಕಾರ ನಡೆಸಿದರೆ ಶ್ರೀರಾಮಚಂದ್ರನ ಹುಟ್ಟೂರಾದ ಅಯೋಧ್ಯ ನಗರದಲ್ಲಿ ಮಂದಿರ ನಿರ್ಮಾಣ ಶತಸಿದ್ಧ ಎಂದು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಆಡ್ವಾಣಿ ತಿಳಿಸಿದ್ದಾರೆ.

1999 ರಲ್ಲಿ ನಮ್ಮ ಪಕ್ಷ ಪ್ರಮುಖವಾಗಿ ಉತ್ತರಪ್ರದೇಶದಲ್ಲಿ ಅಯೋಧ್ಯ ವಿಷಯದ ಮೂಲಕ ಜಯಭೇರಿ ಬಾರಿಸಿತ್ತು, ಇದು ರಾಷ್ಟ್ರ ರಾಜಕಾರಣದ ಪ್ರಮುಖ ಬದಲಾವಣೆಗೆ ಕಾರಣವಾಗಿತ್ತು. ಶ್ರೀರಾಮನ ಹುಟ್ಟೂರಿನಲ್ಲಿ ಮಂದಿರ ನಿರ್ಮಾಣವಾದಾಗ ನಾನು ನಿಮಗೆಲ್ಲರಿಗೂ "ಜೈ ಶ್ರೀರಾಮ್" ಎಂದು ಹೇಳಲು ಕೇಳಿಕೊಳ್ಳುತ್ತೇನೆ ಎಂದು ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು.

1999 ರಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದಾಗ ಅಂಗಪಕ್ಷಗಳ ಪಕ್ಷಗಳ ಒತ್ತಡದಿಂದಾಗಿ ಅಯೋಧ್ಯ ರಾಮಮಂದಿರ ನಿರ್ಮಾಣ ನೆನೆಗುದಿದೆ ಬೀಳುವಂತಾಯಿತು ಎಂದು ಅಡ್ವಾಣಿ ಸಮಜಾಯಿಸಿ ನೀಡಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+