ಪ್ರೇಮಿಗಳಿಗೆ ಅಗ್ನಿ ಶ್ರೀಧರ ಅವರ ಹೆಲ್ಪ್ ಲೈನ್
ಬೆಂಗಳೂರು, ಫೆ. 10 : ಶ್ರೀರಾಮಸೇನೆಯ ಪ್ರೇಮಿಗಳ ದಿನ ವಿರೋಧ ನೀತಿಗೆ ಪರ ವಿರೋಧ ಚರ್ಚೆಗಳು ಮುಂದುವರಿಯುತ್ತಿರುವಾಗಲೇ ಒಂದು ಹೆಜ್ಜೆ ಮುಂದೆ ಹೋಗಿರುವ ಪತ್ರಕರ್ತ, ಚಲನಚಿತ್ರ ನಿರ್ಮಾಪಕ ಅಗ್ನಿ ಶ್ರೀಧರ್ ಪ್ರೇಮಿಗಳ ದಿನ ಯಾವುದೇ ತೊಂದರೆ ಇಲ್ಲದೆ ಸುಗಮವಾಗಿ ನಡೆಯಲು ಬೆಂಗಳೂರು ನಗರದಾದ್ಯಂತ ತಮ್ಮ ಬೆಂಬಲಿಗರನ್ನು ನೇಮಿಸುವುದಾಗಿ ಹೇಳಿದ್ದಾರೆ.
ಪ್ರೇಮಿಗಳು ಅಂದು ಯಾವುದೇ ಭಯಭೀತಿ ಇಲ್ಲದೇ ತಮಗಿಷ್ಟಪಟ್ಟವರ ಜೊತೆಗೆ ವ್ಯಾಲೆಂಟೈನ್ ಡೇಯನ್ನು ಆಚರಿಸಬಹುದು ಎಂದು ಹೇಳಿದ್ದಾರೆ. ಅಲ್ಲದೇ ತಾವೂ ಕೂಡ ಕಳೆದ 15 ವರ್ಷಗಳಿಂದ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವುದಾಗಿ ಹೇಳಿದರು. ಇತಿಹಾಸ ತಜ್ಞ ಎನ್ ವಿ ನರಸಿಂಹಯ್ಯ ಪ್ರೇಮಿಗಳ ದಿನ ಬೆ೦ಬಲಿಸಿ ಮಾತನಾಡುತ್ತ, ಮಹಾಭಾರತದಲ್ಲಿ ಬರುವ ಅರ್ಜುನ - ಸುಭದ್ರ ಪರಿಣಯದ ಉದಾಹರಣೆ ನೀಡಿದರು. ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು.
ಫೆ 14 ರಂದು ನಿರಾತಂಕವಾಗಿ ಇಷ್ಟಪಟ್ಟವರೊಂದಿಗೆ ಪ್ರೇಮಿಗಳ ದಿನ ಆಚರಿಸಿ, ಒಂದು ಪಕ್ಷ ಶ್ರೀರಾಮ ಸೇನೆಯ ಕಾರ್ಯಕರ್ತರು ತೊಂದರೆ ಕೊಟ್ಟರೆ, ಈ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ.
ಅಗ್ನಿ ಶ್ರೀಧರ್ - 94483-53546
ಬಿ ಟಿ ಲಲಿತಾ ನಾಯಕ್ - 94480-67193
ಡಾ ಸಿದ್ದನಗೌಡ ಪಾಟೀಲ್ - 94480-87594
ಕೋಡಿಹಳ್ಳಿ ಚಂದ್ರಶೇಖರ್ - 98442-93908
ಇಂದೂದರ ಹೊನ್ನಾಪುರ - 94480-48306
ಪಟ್ಟಣಗೆರೆ ಜಯಣ್ಣ - 98450-61744
ಪ್ರೊ ಎನ್ ವಿ ನರಸಿಂಹಯ್ಯ - 94483-38889
ಗುರುಶಾಂತ್ - 94482-39114
ವೆ೦ಕಟಸ್ವಾಮಿ - 98441-85332
ಮಾವಳ್ಳಿ ಶಂಕರ್ - 98450-27456
ಪಟಾಪಟ್ ನಾಗರಾಜ್ - 94481-00848
ಲಕ್ಷ್ಮೀನಾರಾಯಣ ನಾಗವಾರ - 94490-59393
ಮಂಜುನಾಥ್ ಅದ್ದೆ - 94484-65233
ತಲಕಾಡ ಚಿಕ್ಕರ೦ಗೇ ಗೌಡ - 98450-56075
ರಮೇಶ್ - 94806-08809
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಪ್ರೇಮಿಗಳ ದಿನದಂದು ಮುತಾಲಿಕ್ಗೆ ಪಿಂಕ್ ಚಡ್ಡಿ!
ಮುತಾಲಿಕರ ಪುಂಡಾಟಿಕೆ ಮತ್ತು ವ್ಯಾಲಂಟೈನ್ಸ್
ಪ್ರೇಮಿಗಳ ದಿನಾಚರಣೆಗೆ ಸಕಲ ಭದ್ರತೆ, ಶಂಕರ ಬಿದರಿ
ಪ್ರೇಮಿಗಳ ದಿನಾಚರಣೆಗೆ ಶ್ರೀರಾಮಸೇನೆ ವಿರೋಧ











Click it and Unblock the Notifications