ಯುಗಯಾತ್ರಿಯಿಂದ ಯೋಗ ಶಿಬಿರ
ನಮ್ಮ ಸಂಸ್ಕೃತಿಯ ಆಳವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ಕಲಿಯಲು 'ರೂಟ್ಸ್' ಎಂಬ ಶಿಬಿರಗಳನ್ನು ಕೆಲವು ವರ್ಷಗಳಿಂದ 'ಯುಗಯಾತ್ರಿ' ಎಂಬ ಸಂಸ್ಥೆ ನಡೆಸಿಕೊಂಡು ಬಂದಿದೆ. ವ್ಯಕ್ತಿತ್ವ ವಿಕಸನದ ಜೊತೆಗೆ ಯೋಗ, ಧ್ಯಾನಗಳು, ನಮ್ಮ ಜೀವನ ಪದ್ಧತಿಯ ಹಿನ್ನೆಲೆಗಳನ್ನು ಅರಿಯುವುದು, ನಮ್ಮ, ಸಮಾಜದ, ಜಗತ್ತಿನ ಮಧ್ಯೆ ಇರುವ ಸಂಬಂಧವನ್ನು ಅರಿಯುವುದು ರೂಟ್ಸ್ ಶಿಬಿರದಉದ್ದೇಶ.
ರೂಟ್ಸ್ ಶಿಬಿರದಲ್ಲಿ ಭಾಗವಹಿಸುವ ಅವಕಾಶವನ್ನು ಯುಗಯಾತ್ರಿ ಈ ತಿಂಗಳ(ಫೆಬ್ರವರಿ) 13 ಶುಕ್ರವಾರ ಸಂಜೆಯಿಂದ 15, ಭಾನುವಾರ ಸಂಜೆಯವರೆಗೆ ಹಮ್ಮಿಕೊಂಡಿದೆ. ಡಾ| ಆರ್ ನಾಗರತ್ನ (ಯೋಗ ಥೆರಪಿಸ್ಟ್), ಪ್ರೊ. ಎನ್ ವಿ ಸಿ ಸ್ವಾಮಿ(ಮದ್ರಾಸ್ ಐಐಟಿಯ ಹಿಂದಿನ ಡೈರೆಕ್ಟರ್), ಪ್ರೊ ಬಿ ಮಾಧವನ್(ಡೀನ್, ಐಐಎಮ್ ಬೆಂಗಳೂರು) ಮುಂತಾದವರು ಮಾರ್ಗದರ್ಶನ ನೀಡಲಿದ್ದಾರೆ.
ಆಸಕ್ತರು ಸಂಪರ್ಕಿಸಿ:
ಸ್ಥಳ: ಜಿಗಣಿಯ ಪ್ರಶಾಂತಿ ಕುಟೀರ
ಸಂತೋಷ್. ಜಿ.ಆರ್ 94488 91472
ಈಮೇಲ್ : [email protected]
ವೆಬ್: http://yugayatri.net/activities/roots/
(ದಟ್ಸ್ ಕನ್ನಡಸಭೆ, ಸಮಾರಂಭ, ಶಿಬಿರ)












Click it and Unblock the Notifications