ಮಂಗಳೂರು ಶಾಸಕರ ಪುತ್ರಿ ಅಪಹರಣ 5 ಬಂಧನ
ಮಂಗಳೂರು, ಫೆ. 8 : ಕೇರಳದ ಮಂಜೇಶ್ವರ ಶಾಸಕ ಸಿ ಎಚ್ ಕುಇಂಬು ಅವರ ಪುತ್ರಿ ಶ್ರುತಿ ಮತ್ತು ಆಕೆಯ ಸ್ನೇಹಿತೆಯ ತಮ್ಮ ಶಬೀಬಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿಗ್ದಾರೆ.
ಬಂಧಿತರು ಮಂಜೇಶ್ವರ ಆಸುಪಾಸಿನವರಾದ ಖಾಸಗಿ ಬಸ್ಸಿನ ಟೈಂ ಕೀಪರ್ ರಾಜು ಅಲಿಯಾಸ್ ರಾಜೇಶ್ (30) ಮೆಕ್ಯಾನಿಕ್ ರಂಜಿತ್ (35) ಬಸ್ಸಿನ ಚಾಲಕ ಅರವಿಂದ ದಾಸ್ (30), ಚಾಲಕ ಸತೀಶ್ (30) ಹಾಗೂ ಮಂಗಳೂರು ಪ್ರಕಾಶ್ (30) ಎಂದು ಗುರುತಿಸಲಾಗಿದೆ. ಪ್ರಕರಣದ ಆರೋಪಿಗಳ ಬಂಧನ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್, ಘಟನೆಯ ಹಿಂದಿನ ಉದ್ದೇಶ, ಆರೋಪಿಗಳನ್ನು ಯಾವುದಾದರೂ ಸಂಘಟನೆಯ ಅಥವಾ ರಾಜಕೀಯ ಪಕ್ಷದ ಸದಸ್ಯರೆ ಎಂಬದನ್ನು ಇನ್ನಷ್ಟೆ ವಿಚಾರಣೆಗೆ ಒಳಪಡಿಸಬೇಕಾಗಿದೆ. ಈ ಕೃತ್ಯದ ಹಿಂದಿನ ಪ್ರೇರಕರು ಯಾರು ಎಂಬುದು ಕೂಡ ವಿಚಾರಣೆಯಿಂದ ತಿಳಿಯಬೇಕಿದೆ ಎಂದರು.
ಕೃತ್ಯದ ಹಿಂದೆ ತಮ್ಮ ಪಾತ್ರವನ್ನು ಸ್ಥಳೀಯ ಸಂಘಟನೆಗಳು (ಬಜರಂಗದಳ, ಶ್ರೀರಾಮಸೇನೆ) ನಿರಾಕರಿಸಿವೆ. ಆದರೆ ಮೆಲ್ನೋಟಕ್ಕೆ ಆರೋಪಿಗಳು ಯಾವುದೇ ಸಂಘಟನೆಯ ಸದಸ್ಯರಂತೆ ಕಂಡುಬರುತ್ತಿಲ್ಲ ಎಂದರು. ಶ್ರುತಿಯನ್ನು ಬಸ್ಸಿನಿಂದ ಇಳಿಸಿ ಕರೆದುಕೊಂಡು ಹೋಗಿರುವ ಆಟೋ ಪತ್ತೆಯಾಗಿಲ್ಲ ಎಂದು ಎಸ್ಪಿ ಸತೀಶ್ ಕುಮಾರ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಶ್ರುತಿ ಪ್ರಕರಣದಲ್ಲಿ ಸೇನೆ ಕೈವಾಡವಿಲ್ಲ : ಮುತಾಲಿಕ್
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications