ಶಿಕ್ಷಣದ ಕೇಸರೀಕರಣ ನಿಲ್ಲಿಸಿ, ಅನಂತಮೂರ್ತಿ
ಬೆಂಗಳೂರು, ಫೆ. 6 : ಶಿಕ್ಷಣದ ಕೇಸರೀಕರಣ ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ. ಯು ಆರ್ ಅನಂತಮೂರ್ತಿ ನೇತೃತ್ವದ ಚಿಂತಕರು ಮತ್ತು ಗಣ್ಯರ ನಿಯೋಗ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಭಯೋತ್ಪಾದನೆ ವಿರೋಧಿ ಅಭಿಯಾನದ ವಿರುದ್ಧ ಮನವಿ ಸಲ್ಲಿಸಿತು.
ಈ ಸಂಬಂಧ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಕರೆದು ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ನಿಯೋಗ ಮನವಿ ಮಾಡಿಕೊಂಡಿತು. ಕೇವಲ ಒಂದೇ ಧರ್ಮದವರು ಸೇರಿ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಿದರೆ ಅದು ಇತರ ಧರ್ಮದವರಿಗೆ ನೋವಾಗುತ್ತದೆ. ಎಲ್ಲರನ್ನು ಸೇರಿಸಿಕೊಂಡು ಹೋರಾಟ ಮಾಡಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಅಭಿಯಾನ ನಡೆಸಲು ರಚಿಸಿರುವ ಸಮಿತಿಯನ್ನು ಈ ತಕ್ಷಣವೇ ಪುನರ್ ರಚಿಸಬೇಕು. ಅದರಲ್ಲಿ ಎಲ್ಲ ಧರ್ಮದವರನ್ನೂ ಸೇರಿಸಬೇಕು. ಕೇವಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಇಟ್ಟುಕೊಂಡು ಕೆಲಸ ಮಾಡುವುದು ಸರಿ ಅಲ್ಲ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಪ್ರೇಮಿಗಳ ದಿನಾಚರಣೆಗೆ ಶ್ರೀರಾಮಸೇನೆ ವಿರೋಧ











Click it and Unblock the Notifications