ಹಿರಿಯ ನ್ಯಾಯವಾದಿ ಎಚ್ ಬಿ ದಾತಾರ್ ನಿಧನ
ಬೆಂಗಳೂರು, ಫೆ. 5 : ಗಡಿ ವಿಚಾರದಲ್ಲಿ ರಾಜ್ಯದ ಘನತೆ ಎತ್ತಿ ಹಿಡಿದಿದ್ದ ಸುಪ್ರಿಂಕೋರ್ಟ್ ಹಿರಿಯ ವಕೀಲ ಎಚ್ ಬಿ ದಾತಾರ್ (83) ಬುಧವಾರ ಮಧ್ಯಾನ್ಹ ಸದಾಶಿವನಗರದ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.
ಏಪ್ರಿಲ್ 6, 1925ರಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜನಿಸಿದರು. 1946ರಲ್ಲಿ ಮುಂಬೈಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ, 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ ಬೆಂಗಳೂರಿಗೆ ಬಂದು ನೆಲೆಸಿದರು. ರಾಜ್ಯ ಹೈಕೋರ್ಟ್ ನಲ್ಲಿ ಎರಡು ವರ್ಷ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ದಾತಾರ್, ನಂತರ ರಾಜೀನಾಮೆ ನೀಡಿ ಸುಪ್ರಿಂಕೋರ್ಟ್ ವಕೀಲರಾದರು.
ಕನ್ನಡ ಹೋರಾಟಗಾರರಾಗಿದ್ದ ಅವರು, 2003ರಲ್ಲಿ ಗಡಿ ಸಮಸ್ಯೆ ಸಲಹಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ಸುಪ್ರಿಂಕೋರ್ಟ್ ನಲ್ಲಿ ಕರ್ನಾಟಕ ಪರವಾಗಿ 1800 ಪುಟಗಳ ಪ್ರತಿವಾದ ಮಂಡಿಸಿದ್ದರು. ಅವರಿಗೆ ಗಡಿ ಭಾಗದ ಪ್ರತಿ ಗ್ರಾಮದಲ್ಲಿನ ಜನಸಂಖ್ಯೆ ಹಾಗೂ ಭೌಗೋಳಿಕ ಸಮಸ್ಯೆಗಳ ಕುರಿತ ಮಾಹಿತಿಕರತಲಾಮಲಕವಾಗಿತ್ತು. ಅಂತಿಮ ಹಂತದವರೆಗೂ ಮಹಾಜನ್ ಸಮಿತಿ ಮುಂದೆ ರಾಜ್ಯದ ಪರವಾಗಿ ಮಂಡಿಸಿದ್ದರು. ದಾತಾರ್ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಎಚ್ ಕೆ ಪಾಟೀಲ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಕನ್ನಡ ನೆಲದಲ್ಲಿ ಕನ್ನಡ ಧ್ವಜ ಹಾರಿಸುವುದು ತಪ್ಪೆ?












Click it and Unblock the Notifications