ಬಿಎಸ್ ವೈ ಪತ್ನಿ ಸಾವಿನ ತನಿಖೆಗೆ ಕೋರ್ಟ್ ಸೂಚನೆ
ಶಿವಮೊಗ್ಗ, ಫೆ.2: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ದಿ.ಮೈತ್ರಾದೇವಿ ಸಾವಿನ ಕುರಿತು ತನಿಖೆ ನಡೆಸುವಂತೆ ವಕೀಲರೊಬ್ಬರು ಶಿವಮೊಗ್ಗ ನ್ಯಾಯಾಲದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಿದ್ದಾರೆ.
ಎರಡನೆ ಜೆಎಂಎಫ್ ಸಿ ನ್ಯಾಯಾಲಯ ದೂರನ್ನು ಸ್ವೀಕರಿಸಿದೆ. ನ್ಯಾಯಾಧೀಶ ಎಸ್.ಎಂ.ಕಲ್ಕಳ್ಳಿ ಪ್ರಕರಣ ಕುರಿತು ತನಿಖೆ ನಡೆಸುವಂತೆ ಹಾಗೂ ಮಾ.31ರ ಒಳಗೆ ವರದಿ ಸಲ್ಲಿಸಲು ದೊಡ್ಡಪೇಟೆ ಪೊಲೀಸ್ ಠಾಣೆಗೆ ಆದೇಶಿಸಿದ್ದಾರೆ. ಆ.16, 2004ರಲ್ಲಿ ತಮ್ಮ ಮನೆಯ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದರು.
"ಮೈತ್ರಾದೇವಿ ಅವರ ಸಾವು ಸಂಶಯಾಸ್ಪದವಾಗಿದೆ. ಯಡಿಯೂರಪ್ಪ ಅವರ ಮಕ್ಕಳಾದ ಅರುಣಾದೇವಿ, ರಾಘವೇಂದ್ರ, ವಿಜಯೇಂದ್ರ ಸಹಾಯಕ ಎಸ್.ವಿ.ಮಂಜುನಾಥ್, ಕೆಲಸದಾಕೆ ಪಾರ್ವತಮ್ಮ ಮತ್ತು ಮೈತ್ರಾದೇವಿ ಕಾರಿನ ಚಾಲಕ ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು"' ಎಂದು ನ್ಯಾಯವಾದಿ ದೂರಿನಲ್ಲಿ ಕೋರಿದ್ದಾರೆ.
ತಮ್ಮ ಪತ್ನಿಯ ಸಾವಿನ ಕುರಿತು ನ್ಯಾಯವಾದಿಯೊಬ್ಬರು ಸಲ್ಲಿಸಿರುವ ದೂರಿನ ಹಿಂದೆ ರಾಜಕೀಯ ಪಿತೂರಿ ಅಡಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವುದು ಇವರ ಉದ್ದೇಶ. ನನಗೆ ಇದೊಂದು ಸವಾಲಾಗಿದ್ದು, ಇದನ್ನು ಎದುರಿಸುತ್ತೇನೆ ಎಂದಿದ್ದಾರೆ ಯಡಿಯೂರಪ್ಪ.
(ದಟ್ಸ್ ಕನ್ನಡ ವಾರ್ತೆ)
ನೊಂದವರಿಗೆ ನೆರವು:ನೂತನ ಡಿಜಿಐಜಿಪಿ ಅಜಯ್












Click it and Unblock the Notifications