ಆನೆಗೊಂದಿ : ಅವಶೇಷಗಳಡಿ ಸಿಕ್ಕ ಎರಡು ದೇಹ ಪತ್ತೆ

ವೆಂಕಟಾಪುರದವರಾದ ಹುಲಗೆಪ್ಪ ಮತ್ತು ಗಾರಿ ನಿಂಗಪ್ಪ ಎಂಬುವವರ ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಇನ್ನೂ ಏಳು ಕಾರ್ಮಿಕರು ಅವಶೇಷದ ಅಡಿ ಸಿಲುಕಿರಬಹುದೆಂದು ಅಂದಾಜು ಮಾಡಲಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ಮೋಹನ್ ಚಕ್ರವರ್ತಿ ಸ್ಥಳದಲ್ಲೇ ನಿಂತು ದೇಹಗಳನ್ನು ಹುಡುಕುವ ಕಾರ್ಯ ನೋಡಿದರು.
ಭಾರೀ ಗಾತ್ರದ ಸಿಮೆಂಟು ಬ್ಲಾಕ್ ಮತ್ತು ಕಬ್ಬಿಣದ ಅಡಿ ಕಾರ್ಮಿಕರು ಸಿಲುಕಿರುವುದರಿಂದ ಅವರನ್ನು ಹೊರತೆಗೆಯಲು ಜಿಲ್ಲಾಡಳಿತ ಹರಸಾಹಸಪಡುತ್ತಿದೆ. ಕೇರಳದಿಂದಲೂ ನುರಿತ ಈಜುಗಾರರನ್ನು ಕರೆಸಲಾಗಿದೆ. ಆದರೆ ನೀರು ಕಲುಷಿತವಾಗಿರುವುದರಿಂದ ಕತ್ತಲಾದ ನಂತರ ದೇಹಗಳನ್ನು ಹೊರತೆಗೆಯಲು ಸಾಧ್ಯವಾಗುತ್ತಿಲ್ಲ.
ನಿರ್ಮಾಣ ಹಂತದಲ್ಲಿದ್ದ ಆನೆಗೊಂದು ತೂಗು ಸೇತುವೆ ಗುರುವಾರ ಮಧ್ಯಾಹ್ನವೇ ಕುಸಿದುಬಿದ್ದಿದೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸೇತುವೆ ನಿರ್ಮಾಣ ಕಾರ್ಯ ಇತ್ತೀಚೆಗೆ ತಾನೆ ಆರಂಭವಾಗಿತ್ತು.
(ಏಜೆನ್ಸೀಸ್)












Click it and Unblock the Notifications