ಬೆಂಗಳೂರಿನಲ್ಲಿ ಮತ್ತೆ ಒಂಟಿ ಮಹಿಳೆ ಕೊಲೆ
ಬೆಂಗಳೂರು, ಜ. 23 : ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ನಾಗರಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ತಿಂಗಳಲ್ಲಿ ನಡೆದಿರುವ ಕೊಲೆಗಳ ಸಂಖ್ಯೆ ಅದರಲ್ಲೂ ಮಹಿಳೆಯರ ಹತ್ಯೆ ಗಮನಾರ್ಹವಾಗಿ ಏರಿದೆ. ಪೊಲೀಸರು ಕೈಕಟ್ಟಿ ಕುಳಿತರೆ, ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಇಲ್ಲಿಯವರೆಗೂ ಆಗಿರುವ ಕೊಲೆಗಳ ಬಗ್ಗೆ ತನಿಖೆ ಮುಂದುವರಿದಿದೆ. ಆದರೆ, ಆರೋಪಿಯನ್ನು ಬಂಧಿಸುವುವಲ್ಲಿ ಪೊಲೀಸರು ವಿಫಲರಾಗಿರುವುದು ಸಾರ್ವಜನಿಕರಿಂದ ತೀವ್ರ ಆಸಮಾಧಾನ ಹಾಗೂ ಆಕ್ರೋಶ ವ್ಯಕ್ತವಾಗಿದೆ.
ಜಯನಗರದ ವೃದ್ಧ ದಂಪತಿಗಳ ಕೊಲೆ, ತ್ರಿವಳಿ ಮಹಿಳೆಯರ ಹತ್ಯೆ ಹಾಗೂ ಒಂಟಿ ಮಹಿಳೆ ಕೊಲೆಗಳ ಸುದ್ದಿ ಮಾಸುವ ಮುನ್ನವೇ ಇಂದು ನಗರದ ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದ ಸಿಂಡಿಕೇಟ್ ಬ್ಯಾಂಕ್ ಬಳಿ ದುರ್ಷರ್ಮಿಗಳು ಒಂಟಿ ಮಹಿಳೆಯ ತೆಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.
ಮೃತ ಮಹಿಳೆಯನ್ನು ರಮಾದೇವಿ (45) ಎಂದು ಗುರುತಿಸಲಾಗಿದೆ. ಇಂದು ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದ್ದು, ಆಸ್ತಿಗಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಆರಂಭಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications