ಪ್ರತ್ಯೇಕ ಬಂಧೀಖಾನೆ ಗೆ ರಾಮಲಿಂಗರಾಜು ಮನವಿ
ಹೈದರಾಬಾದ್, ಜ.17: ಚಂಚಲ್ ಗೂಡ ಜೈಲಿನಲ್ಲಿ ತಮ್ಮನ್ನು ವಿಶೇಷವಾಗಿ ನೋಡಿಕೊಳ್ಳುವ ವ್ಯವಸ್ಥೆ ಮಾಡಿ ಎಂದು ಸತ್ಯಂ ಕಂಪ್ಯೂಟರ್ಸ್ ನ ಮಾಜಿ ಅಧ್ಯಕ್ಷ ರಾಮಲಿಂಗರಾಜು ಕೋರ್ಟ್ ಗೆ ಶನಿವಾರ ಮನವಿ ಮಾಡಿಕೊಂಡರು.
ನಾನು, ನನ್ನ ಸಹೋದರ ರಾಮರಾಜು ಹಾಗೂ ಸಿಎಫ್ ಒ ವಿ.ಶ್ರೀನಿವಾಸನ್ ಅವರನ್ನ್ನು ಜೈಲಿನ ಇತರ ಖೈದಿಗಳೊಂದಿಗೆ ಹಾಕಬೇಡಿ ಎಂದು ಅವರು ವಿನಂತಿಸಿಕೊಂಡರು. ಪ್ರಸ್ತುತ ರಾಮಲಿಂಗರಾಜು ಅವರ ಸಹೋದರ ಮತ್ತು ಸಿಎಫ್ ಒ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆಂಧ್ರಪ್ರದೇಶ್ ಕಾರಾಗೃಹ ಕಾಯಿದೆ 730ರ ಪ್ರಕಾರ ರಾಜು ಅವರಿಗೆ ಪ್ರತ್ಯೇಕ ಬಂಧೀಖಾನೆ ನೀಡುವಂತೆ ಆತನ ಪರ ವಕೀಲರಾದ ರವಿಂದರ್ ರೆಡ್ಡಿ ಆರನೇ ಮೆಟ್ರೊಪಾಲಿಟನ್ ಕೋರ್ಟಿನ ನ್ಯಾಯಾಧೀಶರನ್ನು ಕೋರಿದರು. ಜ.10ರಿಂದ ರಾಮಲಿಂಗರಾಜು ಅವರನ್ನು ವರದಕ್ಷಿಣೆ ಪಡೆದ ಆರೋಪಿಗಳೊಂದಿಗೆ ಇಡಲಾಗಿದೆ ಎಂದು ವಕೀಲರು ಕೋರ್ಟ್ ಗೆ ತಿಳಿಸಿದರು.
(ಏಜೆನ್ಸೀಸ್)
ಸಿಐಡಿ ಪೊಲೀಸರಿಂದ ಸತ್ಯಂ ರಾಜು ಬಂಧನ












Click it and Unblock the Notifications