ಬೆಳಗಾವಿ ಮಹಾಮೇಳಾವಕ್ಕೆ ಠಾಕ್ರೆ
ಬೆಳಗಾವಿ, ಜ. 12 : ಮಹಾರಾಷ್ಟ್ರ ಏಕೀಕರಣ ಸಮಿತಿ ಜನವರಿ 16 ರಂದು ಬೆಳಗಾವಿಯಲ್ಲಿ ಏರ್ಪಡಿಸಲಾಗಿರುವ ಮಹಾಮೇಳಾವ ಸಮ್ಮೇಳನಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಭಾಗವಹಿಸಲಿಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಎಂಇಎಸ್ ಶಾಸಕ ಮನೋಹರ ಕಿಣೇಕರ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ಮೂಲಕ ಮಹಾರಾಷ್ಟ್ರ ಏಕೀಕರಣ ಹೋರಾಟ ಸಮಿತಿ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು. ಜನವರಿ 16ಕ್ಕೆ ಬೆಳಗಾವಿಯಲ್ಲಿ ಏರ್ಪಡಿಸಲಾಗಿರುವ ಮೇಹಾ ಮೇಳಾವ ಸಮಾರಂಭದಕ್ಕೆ ಗಡಿಭಾಗದಲ್ಲಿರುವ ಎಲ್ಲ ಮರಾಠಿಗರು ಪಾಲ್ಗೊಂಡು ಹೋರಾಟಕ್ಕೆ ಬಲ ನೀಡಬೇಕು ಎಂದು ಕಿಣೇಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಛಗನ್ ಭುಜಬಲ್, ಮಾಜಿ ಉಪಮುಖ್ಯಮಂತ್ರಿ ಆರ್ ಆರ್ ಪಾಟೀಲ್, ಪ್ರತಿಪಕ್ಷದ ನಾಯಕ ರಾಮದಾಸ್ ಕದಂ, ಸಚಿವರಾದ ಮಾಣಿಕ್ ರಾವ್ ಠಾಕ್ರೆ, ಎಲ್ ಐ ಪಾಟೀಲ್, ಅರ್ಜುನ್ ಗೋರಾಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕಿಣೇಕರ್ ಹೇಳಿದರು. ಜನವರಿ 16 ರಂದು ಕರ್ನಾಟಕದ ವಿಧಾನಸಭೆ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ಮರಾಠಿ ಬೆಂಬಲಿಗರು ನಡೆಸುತ್ತಿರುವ ಮಹಾಮೇಳಾವ ಸಮಾವೇಶಕ್ಕೆ ಭಾರಿ ಮಹತ್ವದ ಬಂದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications