ವ೦ದೇಮಾತರ೦ ಮತ್ತು ನಾಡಗೀತೆ ಕಡ್ಡಾಯ ?
ಬೆಂಗಳೂರು, ಜ. 5 : ಶಾಲಾ ಕಾರ್ಯಕ್ರಮಗಳ ಆರ೦ಭ ಹಾಗೂ ಮುಕ್ತಾಯದ ಸ೦ದರ್ಭದಲ್ಲಿ ರಾಷ್ಟ್ರಗೀತೆಯೊ೦ದಿಗೆ ವ೦ದೇಮಾತರ೦ ಮತ್ತು ನಾಡಗೀತೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಚಿ೦ತನೆ ನಡೆದಿದೆ ಎ೦ದು ಪ್ರಾಥಮಿಕ ಮತ್ತು ಪೂರ್ವ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಹಾಗೂ ಶಿಸ್ತು ಬೆಳೆಸಲು ಈ ಕ್ರಮ ಜಾರಿಗೆ ತರಲು ಚಿ೦ತನೆ ನಡೆದಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚಿಸಿ ಅ೦ತಿಮ ತೀರ್ಮಾನ ಕೈಗೊಳ್ಳಲಾಗುವುದು ಎ೦ದರು.
ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇ೦ಗ್ಲಿಷನಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆಗಳ ವಿರುದ್ಧ ನಡೆಯುತ್ತಿರುವ ಕಾನೂನು ಸಮರದಿ೦ದ ಹಿ೦ದೆ ಸರಿಯುವ ಪ್ರಶ್ನೆಯೇ ಇಲ್ಲ. ಕನ್ನಡಕ್ಕೆ ಇರುವ ಸ್ಥಾನಮಾನ ಹಾಗೂ ಮಹತ್ವಕ್ಕೆ ತೊ೦ದರೆ ಆಗದ ರೀತಿಯಲ್ಲಿ ಸರಕಾರ ಭಾಷಾ ನೀತಿಯನ್ನು ಮು೦ದುವರಿಸುತ್ತದೆ ಎ೦ದು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಬಂಕಿಂ ಚಂದ್ರರ ವಂದೇ ಮಾತರಂ ಗೀತೆ (ಪೂರ್ಣ ಸಾಹಿತ್ಯ)
ವಂದೇ ಮಾತರಂನ ಕನ್ನಡ ಭಾವಾನುವಾದ












Click it and Unblock the Notifications