ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜ 12 ರಂದು ಅಡ್ವಾಣಿ ಹುಬ್ಬಳ್ಳಿಗೆ ಆಗಮನ
ಹುಬ್ಬಳ್ಳಿ, ಜ. 5 : ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜನವರಿ 12 ರಂದು ಹುಬ್ಬಳ್ಳಿ ಆಗಮಿಸಲಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ಜಗದೀಶ್ ಶೆಟ್ಟರ್ ತಿಳಿಸಿದರು.
ಜನವರಿ 12 ರಂದು ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಏರ್ಪಡಿಸುವ ಕಾರ್ಯಕ್ರಮದಲ್ಲಿ ಜನಸಂಘದ ಶಾಸಕರಾಗಿದ್ದ ಸದಾಶಿವ ಶೆಟ್ಟರ್ ಹಾಗೂ ಜಗನ್ನಾಥ್ ರಾವ್ ಜೋಶಿ ಅವರ ಕುರಿತು ಪುಸ್ತಕವನ್ನು ಅಡ್ವಾಣಿ ಬಿಡುಗಡೆ ಮಾಡುವರು. ಅದೇ ದಿನ ನೂತನ ಮಿನಿ ವಿಧಾನಸಭೆ ಹಾಗೂ ಅತ್ಯಾಧುನಿಕ ಸೌಲಭ್ಯದ ಗ್ರಂಥಾಲಯವನ್ನು ಅವರು ಉದ್ಘಾಟಿಸುವ ಕಾರ್ಯಕ್ರಮವಿದೆ ಎಂದು ಶೆಟ್ಟರ್ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, January 5, 2009, 15:56 [IST]