ಧೋನಿ ಕುಟುಂಬಕ್ಕೆ ಬೆದರಿಕೆ; 3 ಜನ ವಶ
ರಾಂಚಿ, ಜ. 2 : 50 ಲಕ್ಷ ರುಪಾಯಿ ನೀಡುವಂತೆ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಬಂದಿರುವ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ರಾಂಚಿ ಪೊಲೀಸರು ಇಂದು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಶಿಬುಸೋರೇನ್ ಈ ಪ್ರಕರಣವನ್ನು ಈಗಾಗಲೇ ಸಿಬಿಐ ತನಿಖೆಗೆ ನೀಡಿದ್ದು, ಧೋನಿ ಸೇರಿದಂತೆ ಅವರ ಕುಟುಂಬಕ್ಕೆ ಭಾರಿ ಭದ್ರತೆಯನ್ನು ನಿಯೋಜಿಸಿದ್ದಾರೆ.
ಕಳೆದ ಸೋಮವಾರ ಮುಂಬೈನ ಡಿ ಗ್ಯಾಂಗ್ (ದಾವೂದ್ ಗ್ಯಾಂಗ್) ನ ತಸ್ಲಿಮ್ ಎಂಬ ಹೆಸರಿನ ವ್ಯಕ್ತಿಯೊಬ್ಬನು ಧೋನಿ ಕುಟುಂಬಕ್ಕೆ ಪತ್ರವನ್ನು ರವಾನಿಸಿದ್ದು, 50 ಲಕ್ಷ ರುಪಾಯಿಗಳನ್ನು ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು. ಈ ಹಿನ್ನಲೆಯಲ್ಲಿ ಧೋನಿ ಕುಟುಂಬಕ್ಕೆ ವ್ಯಾಪಕ ಭದ್ರತೆ ನೀಡಲಾಗಿತ್ತು. ಪ್ರಕರಣದ ಬೆನ್ನುಹತ್ತಿದ ರಾಂಚಿ ಪೊಲೀಸರು ಇಂದು ಬೆಳಗ್ಗೆ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಮಂಗಳವಾರ ರಾಂಚಿಗೆ ಆಗಮಿಸಿದ ಮಹೇಂದ್ರ ಸಿಂಗ್ ಧೋನಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಧೋನಿ ಭದ್ರತೆ ಕುರಿತು ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಧೋನಿ ಕುಟುಂಬಕ್ಕೆ ಪತ್ರ ರವಾನಿಸಿರುವ ತಸ್ಲೀಮ್ ಎಂಬಾತ ದಾವೂದ್ ಇಬ್ರಾಹಿಂನ ಬಲಗೈ ಬಂಟ ಎಂದು ರಾಂಚಿ ಹಿರಿಯ ಪೊಲೀಸ್ ಅಧಿಕಾರಿ ಸತ್ಯ ನಾರಾಯಣ ಪ್ರಧಾನ ತಿಳಿಸಿದ್ದಾರೆ. ಕಳೆದ ವರ್ಷ ಮಾವೋವಾದಿಗಳು ಧೋನಿಗೆ ಜೀವ ಬೆದರಿಕೆ ಹಾಕಿದ್ದರು. ಧೋನಿಗೆ ಝಡ್ ಭದ್ರತೆಯನ್ನು ನೀಡಲಾಗಿದೆ.
(ದಟ್ಸ್
ಕನ್ನಡ
ವಾರ್ತೆ)
ಧೋನಿ
ಕುಟುಂಬಕ್ಕೆ
ಡಿ
ಗುಂಪಿನಿಂದ
ಬೆದರಿಕೆ