ನೈಸ್ ಶುಲ್ಕದಲ್ಲಿ ಶೇ. 20ರಷ್ಟು ಕಡಿತ: ಖೇಣಿ
ಬೆಂಗಳೂರು, ಡಿ. 23 : ಬೆಂಗಳೂರು-ಮೈಸೂರು ಪೆರಿಫೆರಲ್ ರಸ್ತೆಯಲ್ಲಿ ವಿಧಿಸಲಾಗುತ್ತಿದ್ದ ದರದಲ್ಲಿ ಶೇ. 20 ರಷ್ಟು ಕಡಿತಗೊಳಿಸಲಾಗಿದೆ. ಜನವರಿ 1 ರಿಂದ ನೂತನ ಪರಿಷ್ಕೃತ ದರ ಜಾರಿಗೆ ತರಲಾಗುವುದು ಎಂದು ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೋಲ್ ಗೆ ಸಂಬಂಧಿಸಿದಂತೆ ಎದ್ದಿರುವ ವಿವಾದಕ್ಕೆ ತೆರೆ ಎಳೆಯಲಾಗುವುದು ಎಂದರು. ಬೆಂಗಳೂರು ಮೈಸೂರು ಕಾರಿಡಾರ್ ಎಕ್ಸ್ ಪ್ರೆಸ್ ಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಈ ಎಲ್ಲ ವಿವಾದಕ್ಕೆ ಕಾರಣರಾಗಿದ್ದಾರೆ. ಇಂದು ಗೊಟ್ಟಿಗೆರೆ ರೈತರು ರಸ್ತೆಗೆ ಭೂಮಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿರುವುದು ಕೂಡ ದೇವೇಗೌಡರ ಪಿತೂರಿಯೇ ಎಂದು ಖೇಣಿ ಆರೋಪಿಸಿದರು.
ಕಳೆದ ವಾರ ನೈಸ್ ಸಂಸ್ಥೆ ಬೆಂಗಳೂರು ಮೈಸೂರು ಪೆರಿಫೆರಲ್ ರಸ್ತೆಗೆ ಶುಲ್ಕ ಜಾರಿ ಮಾಡಿತ್ತು. ವಿಧಿಸುತ್ತಿರುವ ಶುಲ್ಕ ತುಂಬಾ ದುಬಾರಿಯಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಅನೇಕ ಕಡೆಗಳಲ್ಲಿ ನೈಸ್ ಕಂಪನಿಯ ಟೋಲ್ ಕಚೇರಿಗಳನ್ನು ಧ್ವಂಸಗೊಳಿಸಲಾಗಿತ್ತು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಅವರು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಅವರ ಮೇಲೆ ಮುಗಿಬಿದ್ದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು, ಈ ವಿಷಯದ ಬಗ್ಗೆ ರಾಜಕೀಯ ಕೆಸರೆರಚಾಟ ಮುಂದುವರೆಯುತ್ತಲೇ ಇದೆ.
(ದಟ್ಸ್
ಕನ್ನಡ
ವಾರ್ತೆ)
ಗೌಡ್ರವಿರುದ್ಧ
ಕೇಸ್
ಹಾಕಿದ್ರೆ
ಹುಷಾರ್:ಪೂಜಾರಿ
ಗೌಡ್ರ
ವಿರುದ್ಧ
ಕ್ರಿಮಿನಲ್
ಕೇಸ್
ಹಾಕುವೆ:
ಸಿಎಂ