ಶಿವರಾಜ್ ಪಾಟೀಲ್ ಸಚಿವ ಸ್ಥಾನಕ್ಕೆ ರಾಜೀನಾಮೆ
ನವದೆಹಲಿ, ನ. 30 : ಮುಂಬೈ ದಾಳಿಯ ಸಂಬಂಧಿಸಿದಂತೆ ತೀವ್ರ ಟೀಕೆಯ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕೇಂದ್ರದ ಗೃಹ ಸಚಿವ ಶಿವರಾಜ್ ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ರವಾನಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ದೇಶದ ವಿವಿಧೆಡೆ ವಿಧ್ವಂಸಕ ಭಯೋತ್ಪಾದನೆ ಕೃತ್ಯಗಳು ನಡೆದಿವೆ. ಉಗ್ರರ ಅಟ್ಟಹಾಸ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ. ನೈತಿಕ ಹೊಣೆಯ ಹೊತ್ತು ಗೃಹ ಸಚಿವ ಶಿವರಾಜ್ ಪಾಟೀಲ್ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಅಲ್ಲದೇ ಸ್ಫೋಟ ಘಟನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾರಿಕೆ ಉತ್ತರ ನೀಡುತ್ತಾ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಪಾಟೀಲ್ ಅವರ ವರ್ತನೆ ಕಾಂಗ್ರೆಸ್ ಪಾಳೆಯದಲ್ಲೂ ತೀವ್ರ ಅಸಮಾಧಾನ ಉಂಟಾಗಿತ್ತು. ರಾಜೀನಾಮೆ ಪಡೆಯುವಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಪಾಟೀಲ್ ಅವರ ರಾಜೀನಾಮೆ ಪಡೆಯುವಂತೆ ಭಾರಿ ಒತ್ತಡವೂ ಆರಂಭವಾಗಿತ್ತು.
ದೆಹಲಿ ಎನ್ ಕೌಂಟರ್ ನಡೆದಾಗಲೇ ಇದರ ಬಗ್ಗೆ ತೀವ್ರ ಚರ್ಚೆ ನಡೆದು ಪಾಟೀಲ್ ತಲೆದಂಡ ಆಗುವ ಸಾಧ್ಯತೆಗಳಿದ್ದವು. ಆಗ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಶಿವರಾಜ್ ಪಾಟೀಲ್ ಅವರಿಗೆ ಇನ್ನೊಂದು ಅವಕಾಶ ನೀಡಿದ್ದರು. ಆದರೆ ನೀಡಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಪಾಟೀಲ್ ಮತ್ತೊಮ್ಮೆ ವಿಫಲರಾಗಿದ್ದಾರೆ.
ಪ್ರಧಾನಮಂತ್ರಿ
ಮನಮೋಹನ್
ಸಿಂಗ್
ನೇತೃತ್ವದಲ್ಲಿ
ಸರ್ವ
ಪಕ್ಷಗಳ
ಸಭೆಯಲ್ಲಿ
ಸರ್ಕಾರದ
ಕ್ರಮಕ್ಕೆ
ತೀವ್ರ
ಟೀಕೆ
ವ್ಯಕ್ತವಾಗಿತ್ತು.
ಕಾಂಗ್ರೆಸ್
ಕಾರ್ಯಕಾರಿಣಇ
ಸಭೆಯಲ್ಲಿ
ಇವರ
ಕಾರ್ಯಕ್ಕೆ
ಭಾರಿ
ಅಸಮಾಧಾನ
ವ್ಯಕ್ತವಾಗಿತ್ತು.
ಇಂದು
ನಡೆಯುವ
ಸಚಿವ
ಸಂಪುಟ
ಸಭೆಯಲ್ಲಿ
ಶಿವರಾಜ್
ಪಾಟೀಲ್
ಕಾರ್ಯಕ್ಷಮತೆ
ಬಗ್ಗೆ
ಚರ್ಚೆ
ನಡೆಯವ
ಸಾಧ್ಯತೆ
ಇತ್ತು.
ಅದಕ್ಕೂ
ಮುಂಚೆ
ಶಿವರಾಜ್
ಪಾಟೀಲ್
ನೈತಿಕ
ಹೊಣೆ
ಹೊತ್ತು
ರಾಜೀರಾಮೆ
ನೀಡಿದ್ದಾರೆ.
ಪ್ರಧಾನಿ
ಮನಮೋಹನ್
ಸಿಂಗ್
ರಾಜೀನಾಮೆ
ಪತ್ರವನ್ನು
ಸ್ವೀಕರಿಸುವ
ಸಾಧ್ಯತೆಗಳಿವೆ.
(ದಟ್ಸ್
ಕನ್ನಡ
ವಾರ್ತೆ)