ಉಗ್ರರ ನಿಗ್ರಹಕ್ಕೆ ನೂತನ ಕಾಯ್ದೆಬೇಕು : ರಾಹುಲ್ ಗಾಂಧಿ
ಭಟಿಂಡಾ, ಸೆ. 25 : ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿರಿಸಿಕೊಂಡು ಪ್ರಚಾರ ಕಾರ್ಯ ಆರಂಭಿಸಿರುವ ಕಾಂಗ್ರೆಸ್ ಪಕ್ಷದ ಪ್ರದಾನ ಕಾರ್ಯದರ್ಶಿ ರಾಹುಲ್ ಗಾಂಧಿ ಭಯೋತ್ಪಾದನೆ ನಿಗ್ರಹಕ್ಕೆ ನೂತನ ಕಾನೂನು ಅವಶ್ಯವಿದೆ ಎಂದು ಪ್ರತಿಪಾಧಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಉಗ್ರರನ್ನು ನಿಗ್ರಹಿಸುವಲ್ಲಿ ಪೋಟೋ ಕಾಯ್ದೆ ಸಂಪೂರ್ಣ ವೈಫಲ್ಯ ಕಂಡಿರುವ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾದ ಇನ್ನೊಂದು ಕಾಯ್ದೆಬೇಕು ಎಂದರು. ಪೋಟಾ ಕಾಯ್ದೆಯ ವಿಫಲತೆಯನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟ ಅವರು, ರಾಜಕಾರಣಿಗಳಿಗೆ, ರಾಜಕೀಯಕ್ಕೆ ಅಪಾಯಕಾರಿಯಾಗಿದ್ದು, ಈಗಾಗಲೇ ಅನೇಕ ಸಮಸ್ಯೆಗಳನ್ನು ಎದುರಿಸಿದ ಉದಾಹರಣೆ ಕಣ್ಣ ಮುಂದಿವೆ ಎಂದು ಹೇಳಿದರು. ಪೋಟಾ ಕಾಯ್ದೆಯಿಂದ ಅಡ್ಡ ಪರಿಣಾಮಗಳೇ ಹೆಚ್ಚಾಗಿರುವುದರಿಂದ ಮರುಜಾರಿಗೆ ತರುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪೋಟಾ ಕಾಯ್ದೆ ಜಾರಿಯಲ್ಲಿದ್ದಾಗಲೂ ಕಂದಹಾರ್ ಅಪಹರಣ, ಸಂಸತ್ ದಾಳಿ ಪ್ರಕರಣ, ರಾಜಕಾರಣಿಗಳ ಅಪಹರಣ ನಡೆದಿವೆ. ಆದ್ದರಿಂದ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣವಾದ ನೂತನ ಕಾನೂನು ಜಾರಿಯಾಗಬೇಕಾಗಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.
(ದಟ್ಸ್
ಕನ್ನಡ
ವಾರ್ತೆ)
ರಾಹುಲ್
ಗಾಂಧಿಗೆ
ಶೀಘ್ರದಲ್ಲೇ
ವಿವಾಹ
ಯೋಗ!
ದಿಲ್ಲಿ
ಸ್ಫೋಟ
:
ಮಣಿಪಾಲ್
ನಲ್ಲಿ
3
ಜನ
ಸೆರೆ