ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ ಹತ್ಯೆಗೆ ಮುಜಾಹಿದೀನ್ ಸಂಚು

By Staff
|
Google Oneindia Kannada News

mujahideen sends threat mail to adwaniಶಿಲ್ಲಾಂಗ್, ಸೆ. 25: ಹಿಂದುತ್ವದ ಅಸ್ತ್ರವನ್ನು ಕೈಗೆತ್ತಿಕೊಂಡು ಮುಸ್ಲಿಂ ಭಾವನೆಯನ್ನು ಕೆಣಕುತ್ತಿರುವ ಬಿಜೆಪಿ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ಹತ್ಯೆ ಮಾಡುವುದಾಗಿ ಇಂಡಿಯನ್ ಮುಜಾಹಿದೀನ್ ಸಂಘಟನೆ ಮಾಧ್ಯಮ ಕಚೇರಿಗಳಿಗೆ ಈ-ಮೇಲ್ ರವಾನಿಸಿದೆ.

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸೆಪ್ಟೆಂಬರ್ 29ರಂದು ಎಲ್.ಕೆ.ಅಡ್ವಾಣಿ ಶಿಲ್ಲಾಂಗ್ ಗೆ ಭೇಟಿ ನೀಡುವ ಕಾರ್ಯಕ್ರಮವಿದೆ. ಈ ಹಿನ್ನೆಲೆಯಲ್ಲಿ ಹರಕು ಮುರುಕು ಇಂಗ್ಲಿಷ್ ನಲ್ಲಿ ಸ್ಥಳೀಯ ಮಾಧ್ಯಮ ಕಚೇರಿಗಳಿಗೆ ಈ ಮೇಲ್ ಮೂಲಕ ಸಂದೇಶ ರವಾನಿಸಿರುವ ದಕ್ಷಿಣ ಭಾರತದ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಮುಖ್ಯಸ್ಥ ಅಲಿ ಹುಸೇನ್ ಬದ್ರಾ, ಅಡ್ವಾಣಿಯವರು ಹಿಂದುತ್ವದ ಅಸ್ತ್ರವನ್ನು ಕೈಗೆತ್ತಿಕೊಂಡು ಮುಸ್ಲಿಂರ ಭಾವನೆಗಳನ್ನು ಕೆಣುಕುತ್ತಿದ್ದಾರೆ. ಆದ್ದರಿಂದ ಅವರ ಹತ್ಯೆಗೆ ಇಂಡಿಯನ್ ಮುಜಾಹಿದೀನ್ ಮುಂದಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ.

ಇಂಡಿಯನ್ ಮುಜಾಹಿದೀನ್ ಸಂಘಟನೆಯಿಂದ ಬಂದಿರುವ ಅಡ್ವಾಣಿ ಹತ್ಯೆ ಬೆದರಿಕೆ ಸಂದೇಶ ಮೇಘಾಲಯ ಸರ್ಕಾರಕ್ಕೆ ತೀವ್ರ ತಲೆನೋವಾಗಿ ಪರಿಣಿಮಿಸಿದೆ. ಈಮೇಲ್ ಬಂದಿರುವ ಮಾಧ್ಯಮ ಕಚೇರಿಗೆ ಭೇಟಿ ನೀಡಿರುವ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ಎಲ್ಲಿಂದ ಈ ಮೇಲ್ ರವಾನೆಯಾಗಿದೆ ಎನ್ನುವುದನ್ನು ಭೇದಿಸುವಲ್ಲಿ ನಿರತರಾಗಿದೆ. ಇನ್ನೊಂದಡೆ ಮೇಘಾಲಯ ಮುಖ್ಯಮಂತ್ರಿ ಡುಂಕಾಪರ ರಾಯ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಉಗ್ರರ ಸಂಘಟನೆಯಿಂದ ಈಮೇಲ್ ರವಾನೆ, ಅಡ್ವಾಣಿ ಭೇಟಿ ಹಾಗೂ ಭದ್ರತೆ ಕುರಿತು ಚರ್ಚೆ ನಡೆಸುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಪೋಟಾ ಕಾಯ್ದೆ ವೈಫಲ್ಯ: ರಾಹುಲ್ ಗಾಂಧಿ
ಹಿಂದೂ ದೇಗುಲಗಳಿಗೆ ಉಗ್ರರ ಭೀತಿ
ನಗರದ ಗುಪ್ತ ಸ್ಥಳದಲ್ಲಿ 22 ಶಂಕಿತರ ವಿಚಾರಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X