ಬಜೆಟ್ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಮಿತಿ
ಬೆಂಗಳೂರು, ಆ. 7 : ಭಾರತೀಯ ಜನತಾ ಪಕ್ಷ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಎಲ್ಲ ಕಾರ್ಯಕ್ರಮಗಳನ್ನು ಪ್ರಮಾಣಿಕವಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಎಂಟು ಮಂದಿ ಸಮಿತಿ ರಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಬಜೆಟ್ ನ ಮುಖ್ಯ ಕಾರ್ಯಕ್ರಮ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಅನುಕೂಲಕರವಾಗಲಿದೆ ಎನ್ನಲಾದ ಆರೋಗ್ಯ ಕವಚ ಯೋಜನೆ ಜಾರಿಗೆ ತರಲು ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದ್ದು, ಇದಕ್ಕಾಗಿ 150 ಅಂಬುಲೆನ್ಸ್ ಖರೀದಿಸಲು ಸಂಪುಟ ತೀರ್ಮಾನಿಸಿದೆ. ಇಂದು ನಡೆದ ಸಚಿವ ಸಂಪುಟದಲ್ಲಿ ತಗೆದುಕೊಳ್ಳಲಾಗಿರುವ ಕೆಲ ಮಹತ್ವದ ನಿರ್ಧಾರಗಳಲ್ಲಿ ಮುಖ್ಯವಾಗಿ ಭಾಗ್ಯಲಕ್ಷ್ಮಿ ಯೋಜನೆಯ ಠೇವಣಿ ಮೊತ್ತವನ್ನು 10 ಸಾವಿರದಿಂದ 20 ಸಾವಿರಕ್ಕೆ ಹೆಚ್ಚಳ ಮಾಡುವುದು. ನಿವೃತ್ತಿಯಾಗಿರುವ 11 ಮಂದಿ ಕೆಎಎಸ್ ಅಧಿಕಾರಿಗಳ ಸೇವೆಯನ್ನು ಮುಂದುವರೆಸುವುದು. ಪದವಿಪೂರ್ವ ಕಾಲೇಜಿನಲ್ಲಿ ಖಾಲಿ ಇರುವ 4056 ಉಪನ್ಯಾಸಕರ ಹುದ್ದೆಗೆ ನೇಮಕ ಹಾಗೂ ಅದರಲ್ಲಿ 2420 ಹುದ್ದೆಗಳಿಗೆ ನಿವೃತ್ತಿಯಾಗಿರುವ ಉಪನ್ಯಾಸಕರನ್ನು ಗೌರವಧನ ನೀಡಿ ಮತ್ತೆ ಅವರ ಸೇವೆಯನ್ನು ಪಡೆಯುವುದು. ಮಳೆ ಆಧಾರಿತ ಕೃಷಿಕರಿಗೆ ತಿಂಗಳಿಗೆ 1 ಸಾವಿರ ರು.ಗಳ ಸಹಾಯಧನ. ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಸಂತ್ರಸ್ಥರಿಗೆ 205 ಕೋಟಿ ರು.ಗಳ ಪರಿಹಾರವನ್ನು ಘೋಷಣೆ ಮಾಡಲಾಗಿದೆ.
ಹಾಗೆಯೇ, ರಾಜ್ಯದಲ್ಲಿ ಮುಂಗಾರು ಮಳೆ ಮುನಿಸಿಕೊಂಡ ಪರಿಣಾಮ ಜಲಾಶಯಗಳಲ್ಲಿ ನೀರಿನ ಕೊರತೆ ಹೆಚ್ಚಾಗಿದೆ. ಆದ್ದರಿಂದ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ನ್ನು ಮತ್ತೆ ರಾಜ್ಯದ ಜನತೆ ಅನುಭವಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಚಿಂತನೆ ಗಂಭೀರ ಚಿಂತನೆ ನಡೆಸಿದ್ದು, ಕೇಂದ್ರದ ವಿದ್ಯುತ್ ಸಚಿವ ಜೈರಾಮ್ ರಮೇಶ್ ಅವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸೌಧದಲ್ಲಿ ಮಾತುಕತೆ ನಡೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಕಿರಿಯ ಅಧಿಕಾರಿಗಳ ಮೇಲೆ ಒಂದು ಕಣ್ಣಿಡಿ: ಬಿಎಸ್ವೈ
ಉದ್ಯಮಗಳ ವಿಕೇಂದ್ರೀಕರಣಕ್ಕೆ ಯಡಿಯೂರಪ್ಪ ಒತ್ತು











Click it and Unblock the Notifications