ವಿಪ್ರೊ: 3ನೇ ತ್ರೈಮಾಸಿಕದ ಲಾಭ 804.1ಕೋಟಿ ರೂ.
ಬೆಂಗಳೂರು, ಜ.18: ದೇಶದ ಮೂರನೆ ಅತಿ ದೊಡ್ಡ ಸಾಪ್ಟ್ವೇರ್ ಕಂಪನಿ ವಿಪ್ರೊ ಸಂಸ್ಥೆ ತನ್ನ ಮೂರನೆ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದೆ. ಡಿ.31, 2007ಕ್ಕೆ ಅದರ ನಿವ್ವಳ ಲಾಭ 804.10 ಕೋಟಿ ರೂ.ಗಳು. ಹಿಂದಿನ ತ್ರೈಮಾಸಿಕದಲ್ಲಿ 760.30 ಕೋಟಿ ರೂ. ಲಾಭಗಳಿಸಿತ್ತು. ಈ ತ್ರೈಮಾಸಿಕದಲ್ಲಿ ಶೇ. 5.7ರಷ್ಟು ವೃದ್ಧಿ ಸಾಧಿಸಿದೆ.
ಕಳೆದ ಸಾಲಿನಲ್ಲಿ ಸಂಸ್ಥೆಯ ನಿವ್ವಳ ಮಾರಾಟ 4,357 ಕೋಟಿ ರೂ.ಗಳು. ಕಳೆದ ಜುಲೈ-ಸೆಪ್ಟಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಶೇ.4.98ರಷ್ಟು ಅಧಿಕ ಉತ್ಪನ್ನಗಳನ್ನು ವಿಪ್ರೊ ಮಾರಾಟ ಮಾಡಿದೆ. ಡಿ.31, 2007ರ ಕೊನೆಗೆ ಕಂಪನಿಯ ಒಟ್ಟಾರೆ ಆದಾಯ 854 ಕೋಟಿ ರೂ.ಗಳು. ಅದೇ ಕಳೆದ ತ್ರೈಮಾಸಿಕದಲ್ಲಿ ಒಟ್ಟು 814 ಕೋಟಿ ರೂ. ಲಾಭಗಳಿಸಿತ್ತು.
ಜಾಗತಿಕ ಐಟಿ ಸೇವೆಗಳು ಮತ್ತು ಉತ್ಪನ್ನಗಳಿಂದ 3,616 ಕೋಟಿ ರೂ.ಗಳಷ್ಟು ವಾರ್ಷಿಕ ವರಮಾನ ಗಳಿಸಿ ಶೇ. 26ರಷ್ಟು ಲಾಭಗಳಿಸಿದೆ. ಮೂರನೆ ತ್ರೈಮಾಸಿಕದಲ್ಲಿ ಜಾಗತಿಕ ಐಟಿ ಸೇವೆಗಳು ಮತ್ತು ಉತ್ಪನ್ನಗಳಿಗೆ ಹೊಸ 39 ಗ್ರಾಹಕರು ಸೇರ್ಪಡೆಯಾಗಿದ್ದು, ಕಂಪನಿಯ ಗ್ರಾಹಕ ಮತ್ತು ವಿದ್ಯುತ್ ಉತ್ಪನ್ನಗಳು ಶೇ.107ರಷ್ಟು ಹೆಚ್ಚಿಗೆ ಮಾರಾಟವಾಗಿದ್ದು ಕಂಪನಿ ಲಾಭದ ದಿಸೆಯಲ್ಲಿ ಮುನ್ನುಗ್ಗಲು ಕಾರಣವಾಯಿತು.
ಭಾರತ, ಮಧ್ಯಪ್ರಾಚ್ಯ ಮತ್ತು ಏಷ್ಯಾಗಳಲ್ಲಿ ನಮ್ಮ ಕಂಪನಿಗೆ ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚಿನ ಹೊರಗುತ್ತಿಗೆ ಸಿಕ್ಕಕಾರಣ ಭಾರತೀಯ ಮಾರುಕಟ್ಟೆಯಲ್ಲಿ ನಮಗೆ ಹೆಚ್ಚಿನ ಲಾಭ ಪಡೆಯಲು ಸಾದ್ಯವಾಯಿತು. ಮುಂದಿನ ತ್ರೈಮಾಸಿಕದಲ್ಲಿ 955 ದಶಲಕ್ಷ ಡಾಲರ್ ವರಮಾನ ಗಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ವಿಪ್ರೊ ಸಂಸ್ಥೆಯ ಅಧ್ಯಕ್ಷರಾದ ಅಜೀಂ ಪ್ರೇಮ್ಜಿ ತಿಳಿಸಿದ್ದಾರೆ. ಗುರುವಾರದ ಮುಂಬೈ ಷೇರುಪೇಟೆಯಲ್ಲಿ ಕಂಪನಿಯ ಷೇರುಗಳು ಶೇ.0.87ರಷ್ಟು ಏರಿಕೆ ಕಂಡು 460.45 ರೂ.ಗಳ ಬಳಿ ನಿಂತಿದೆ.
(ದಟ್ಸ್ಕನ್ನಡ ವಾರ್ತೆ)
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications