For Daily Alerts
ನ.23ರಂದು ವಿಶ್ವಾಸಮತ ಯಾಚನೆ : ಯಾಕಿಷ್ಟು ದಿನ?
ಬೆಂಗಳೂರು, ನ.12 : ರಾಜ್ಯ ವಿಧಾನಸಭೆಯಲ್ಲಿ ನ.23ರಂದು ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಯಾಚಿಸಲಿದ್ದಾರೆ.
ಸುದ್ದಿಗಾರರ ಜೊತೆ ಸೋಮವಾರ(ನ.12) ಮಾತನಾಡುತ್ತಿದ್ದ ಯಡಿಯೂರಪ್ಪ, ತಮ್ಮ ಐವರು ನೂತನ ಸಚಿವರ ಚೊಚ್ಚಲ ಸಂಪುಟ ಸಭೆ ನಂತರ ಮಾತನಾಡುತ್ತ ಈ ವಿಚಾರ ತಿಳಿಸಿದರು. ಮುಂದಿನ ನಾಲ್ಕು ದಿನಗಳಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಸಂಪುಟ ಪ್ರವೇಶಿಸಲಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿಶ್ವಾಸ ಮತ ಯಾಚನೆ ನಡೆಯಲಿದೆ ಎಂದರು.
ಎಲ್ಲ ವರ್ಗಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರ್ಕಾರ ಕಾಪಾಡಲಿದೆ. ಅನಗತ್ಯ ಆತಂಕ ಬೇಡ ಎಂದು ಯಡಿಯೂರಪ್ಪ ಹೇಳಿದರು.
(ಯುಎನ್ಐ)
Comments
Story first published: Monday, November 12, 2007, 16:50 [IST]