ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣಗಿರಿಯಲ್ಲಿ ಹದಿನೈದನೇ ಅಖಿಲ ಭಾರತ ಮಾವು ಮೇಳ
ಹೊಸೂರು(ತಮಿಳುನಾಡು) : ಅಖಿಲ ಭಾರತ 15ನೇ ಮಾವು ಮೇಳ, ಕೃಷ್ಣಗಿರಿಯಲ್ಲಿ ಜೂನ್ 7ರಿಂದ 26ರವರೆಗೆ ಜರುಗಲಿದೆ. ದೇಶದ ನಾನಾ ಭಾಗದ ಮಾವು ಬೆಳೆಗಾರರು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ.
ಜೂನ್ 7ರಂದು ಇಲ್ಲಿನ ಸರ್ಕಾರಿ ಬಾಲಕರ ಶಾಲೆಯ ಮೈದಾನದಲ್ಲಿ ಮಾವಿನ ಮೇಳವನ್ನು ತಮಿಳುನಾಡಿನ ಕೃಷಿ ಸಚಿವ ವಿ.ಆರ್. ಆರ್ಮುಗಂ ಉದ್ಘಾಟಿಸಲಿದ್ದಾರೆ.
20 ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಸುಮಾರು 100ಕ್ಕೂ ಅಧಿಕ ಮಳಿಗೆಗಳಿರುತ್ತವೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಬೆಳೆಯಲಾಗುವ ವಿವಿಧ ರೀತಿಯ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟವಿರುತ್ತದೆ ಎಂದು ಕೃಷ್ಣಗಿರಿಯ ಜಿಲ್ಲಾಧಿಕಾರಿ ಡಾ. ಸಂತೋಷ್ಬಾಬು ತಿಳಿಸಿದ್ದಾರೆ.
(ಏಜನ್ಸೀಸ್)
Story first published: Friday, June 1, 2007, 5:30 [IST]