ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ ಕಣದಲ್ಲಿ ಮೋದಿ ಮಾತಿನ ಮೋಡಿ

By Staff
|
Google Oneindia Kannada News

ಉಪಚುನಾವಣೆ ಕಣದಲ್ಲಿ ಮೋದಿ ಮಾತಿನ ಮೋಡಿ
ಅವರು ಧರ್ಮಸಿಂಗ್‌ ಅಲ್ಲ, ಸದಾ ನಿದ್ರೆ ಮಾಡುವ ನರಮ್‌ಸಿಂಗ್‌

ಬೆಂಗಳೂರು : ಆಂಧ್ರ ಮತ್ತು ಕರ್ನಾಟಕದಲ್ಲಿ ನಕ್ಸಲ್‌ ಚಳವಳಿ ಹೆಚ್ಚಲು ಕಾಂಗ್ರೆಸ್‌ ಪಕ್ಷವೇ ಕಾರಣ. ಇಲ್ಲಿನ ಸರ್ಕಾರಗಳ ಮೃದು ಧೋರಣೆಯಿಂದ ಇತರ ರಾಜ್ಯಗಳಿಗೂ ನಕ್ಸಲ್‌ ಚಳವಳಿ ಹಬ್ಬುತ್ತಿದೆ ಎಂದು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ದೂರಿದ್ದಾರೆ.

ಚಾಮರಾಜ ಪೇಟೆ ಮತ್ತು ಶಿವಮೊಗ್ಗ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆಂದು ರಾಜ್ಯಕ್ಕೆ ಆಗಮಿಸಿದ್ದ ಅವರು, ಪಕ್ಷದ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮೋದಿ ಉದುರಿಸಿದ ಅಣಿಮುತ್ತು(?)ಗಳ ಸ್ಯಾಂಪಲ್‌ ಇಲ್ಲಿವೆ :

  • ಓಟ್‌ ಬ್ಯಾಂಕ್‌ಗಾಗಿ ನಕ್ಸಲರನ್ನು ಕಾಂಗ್ರೆಸ್‌ ಓಲೈಸುತ್ತಿದೆ.
  • ಸ್ವಂತಿಕೆಯನ್ನು ಕಳೆದುಕೊಂಡಿರುವ ಪ್ರಧಾನಿ ಮನಮೋಹನ್‌ ಸಿಂಗ್‌ರನ್ನು ನಾಯಕರೆಂದು ಪಕ್ಷದ ಕಾಂಗ್ರೆಸ್‌ ಮುಖಂಡರೆ ಗುರ್ತಿಸುವುದಿಲ್ಲ. ಸರ್ಕಾರದ ಸಾಧನೆ ದೊಡ್ಡ ಸೊನ್ನೆ!
  • ದೆಹಲಿಯಲ್ಲಿ ನಡೆಯುವ ಮುಖ್ಯಮಂತ್ರಿಗಳ ಸಭೆಯಲ್ಲಿ ಕರ್ನಾಟಕ ಸಮಸ್ಯೆಗಳತ್ತ ಗಮನ ಸೆಳೆಯಬೇಕಾದ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ನಿದ್ದೆ ಮಾಡುತ್ತಾರೆ. ನಾನೇ ಕೆಲವೊಮ್ಮೆ ತಿವಿದು ಎಬ್ಬಿಸುತ್ತೇನೆ. ಅವರು ಧರ್ಮಸಿಂಗ್‌ ಅಲ್ಲ ನರಮ್‌ಸಿಂಗ್‌!
  • ಕ್ಷೇತ್ರದ ಜನರನ್ನು ಮರೆತು, ಅವರನ್ನು ನಡುನೀರಲ್ಲಿ ಕೈಬಿಟ್ಟು ಕಲಿಯುಗದ ಕೃಷ್ಣ (ಮಹಾರಾಷ್ಟ್ರ ರಾಜ್ಯಪಾಲ)ಓಡಿಹೋದ!
  • ಬಂಗಾರಪ್ಪ ರಾಜಕಾರಣಕ್ಕೆ ಫುಲ್‌ಸ್ಟಾಪ್‌ ಹಾಕಿ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X