ವಿಜಯಮಲ್ಯ ವಿರುದ್ಧ ಪಕ್ಷದ ಸೋತ 150 ಹುರಿಯಾಳುಗಳ ಬಂಡಾಯ
ವಿಜಯಮಲ್ಯ
ವಿರುದ್ಧ
ಪಕ್ಷದ
ಸೋತ
150
ಹುರಿಯಾಳುಗಳ
ಬಂಡಾಯ
ಸೆ.27ರಿಂದ
ಮಲ್ಯ
ಕಚೇರಿಯೆದುರು
ಅಮರಣಾಂತ
ಉಪವಾಸ
ಸೆ.27 ರಂದು ವಿಜಯಮಲ್ಯ ಅವರ ಕಚೇರಿ ಬಳಿ ಈ ಎಲ್ಲಾ ಅಭ್ಯರ್ಥಿಗಳು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಸಹಾ ಮುಂದಾಗಿದ್ದಾರೆ.
ವಿಜಯಮಲ್ಯರ ನಿರಾಸಕ್ತಿ ಹಾಗೂ ಬೇಜಚಿಛಿಬ್ದಾರಿಯ ಪರಿಣಾಮ ಜನತಾಪಕ್ಷ ಅಪ್ರಸ್ತುತವಾಗುತ್ತಿದೆ. ಮಲ್ಯರ ಆಕರ್ಷಕ ವ್ಯಕ್ತಿತ್ವ ಹಾಗೂ ಬಣ್ಣದ ಮಾತುಗಳಿಗೆ ಮರುಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಲಕ್ಷಾಂತರ ರೂ.ಗಳನ್ನು ನಷ್ಟಮಾಡಿಕೊಂಡಿದ್ದೇವೆ. ಪಕ್ಷದ ಏಳ್ಗೆಗಾಗಿ ಅವರು ಶ್ರಮಿಸಬೇಕು ಅಥವಾ ಚುನಾವಣೆಯಲ್ಲಿ ನಾವು ಕಳೆದು ಕೊಂಡಿರುವ ಹಣವನ್ನು ಮರಳಿಸಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಕೆಲವರನ್ನು ಹೊರತು ಪಡಿಸಿ ಬಹುದೇಕ ಅಭ್ಯರ್ಥಿಗಳಿಗೆ ವಿಜಯಮಲ್ಯ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆ ಯಂತೆ ಹಣವನ್ನು ನೀಡಿಲ್ಲ . ಮಲ್ಯರನ್ನು ನಂಬಿ ಅಭ್ಯರ್ಥಿಗಳು ಸಾಕಷ್ಟು ಹಣ ಖರ್ಚುಮಾಡಿದ್ದರು. ಚುನಾವಣೆ ನಂತರ ಮಲ್ಯರ ವಂಚನೆಯಿಂದ ಬೇಸತ್ತು ಹೋರಾಟದ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು