ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒತ್ತಡಕ್ಕೆಮಣಿದ ಸರ್ಕಾರ: ನಾಡಗೀತೆಗೆ ಮಧ್ವಚಾರ್ಯ ಸೇರ್ಪಡೆ

By Staff
|
Google Oneindia Kannada News

ಒತ್ತಡಕ್ಕೆಮಣಿದ ಸರ್ಕಾರ: ನಾಡಗೀತೆಗೆ ಮಧ್ವಚಾರ್ಯ ಸೇರ್ಪಡೆ
ಪೇಜಾವರ ಶ್ರೀಗೆ ಸಂತೋಷ, ನಿಲುವು ಬದಲಿಸದ ಪೂರ್ಣಚಂದ್ರ ತೇಜಸ್ವಿ

ಬೆಂಗಳೂರು : ಕುವೆಂಪು ವಿರಚಿತ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ ಕವಿತೆಯಲ್ಲಿ ಮಧ್ವಾಚಾರ್ಯರ ಹೆಸರನ್ನು ಸೇರಿಸುವಂತೆ ಮಧ್ವರ ಅಭಿಮಾನಿಗಳ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ನಾಡಗೀತೆಯಲ್ಲಿ ಮಧ್ವರ ಹೆಸರು ಸೇರ್ಪಡೆಗೆ ಒಪ್ಪಿಕೊಂಡಿದೆ.

ರಾಜ್ಯ ಸಚಿವ ಸಂಪುಟ ಸಭೆ ತನ್ನ ಶುಕ್ರವಾರದ (ಜ.30) ಸಭೆಯಲ್ಲಿ ನಾಡಗೀತೆಯಲ್ಲಿ ಮಧ್ವಾಚಾರ್ಯರ ಹಾಗೂ ಕುಮಾರವ್ಯಾಸರ ಹೆಸರನ್ನು ಸೇರಿಸಲು ತೀರ್ಮಾನಿಸಿತು. ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ತಾ ಸಚಿವ ಡಾ.ಜಿ.ಪರಮೇಶ್ವರ- ‘ವಿಚಾರ ಕ್ರಾಂತಿಗೆ ಆಹ್ವಾನ’ ಎಂಬ ಪುಸ್ತಕದಲ್ಲಿ ಯಾರ್ಯಾರ ಹೆಸರು ಸೇರಿಸಬೇಕು ಎನ್ನುವ ಕುರಿತು ಸ್ವತಃ ಕುವೆಂಪು ಅವರೇ ತಿದ್ದುಪಡಿ ಮಾಡಿದ್ದಾರೆ. ಈ ಪುಸ್ತಕದ ಆಧಾರದ ಮೇಲೆಯೇ ನಾಡಗೀತೆಯಲ್ಲಿ ಮಧ್ವರ ಹೆಸರು ಸೇರಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು.

ಪೇಜಾವರ ಶ್ರೀಗೆ ಸಂತೋಷ, ತೇಜಸ್ವಿಗೆ ಜಿಗುಪ್ಸೆ

ನಾಡಗೀತೆಯಲ್ಲಿ ಮಧ್ವರ ಹೆಸರನ್ನು ಸೇರಿಸಿರುವ ಸರ್ಕಾರದ ನಿರ್ಧಾರವರ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ. ಸರ್ಕಾರವು ನ್ಯಾಯಯುತವಾದ ತೀರ್ಮಾನ ಕೈಗೊಂಡಿದೆ. ಇದರಿಂದಾಗಿ ತಮಗೆ ಸಂತೋಷವಾಗಿದೆ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.

ನಾಡಗೀತೆಯಲ್ಲಿ ಮಧ್ವರ ಹೆಸರು ಸೇರ್ಪಡೆಗೆ ತಮ್ಮ ವಿರೋಧ ಈಗಲೂ ಇದೆ ಎಂದು ಪ್ರತಿಕ್ರಿಯಿಸಿರುವ ಪೂರ್ಣಚಂದ್ರ ತೇಜಸ್ವಿ- ನಾಡಗೀತೆಯಲ್ಲಿ ಮಧ್ವರ ಹೆಸರು ಸೇರ್ಪಡೆಗೆ ಕುವೆಂಪು ಒಪ್ಪಿದ್ದರು ಎನ್ನುವ ಕುರಿತು ಸರ್ಕಾರದ ಬಳಿ ದಾಖಲೆ ಇರಬಹುದು, ಆ ವಿಷಯ ನನಗೆ ಗೊತ್ತಿಲ್ಲ ಎಂದರು. ನಾಡಗೀತೆಯ ಜಗಳವನ್ನು ಅನೇಕರು ಬೀದಿಗೆ ತಂದು ರಂಪ ಮಾಡಿದರು. ಈ ಜಗಳ ಅಸಹ್ಯಕರವಾಗಿದೆ ಎಂದು ತೇಜಸ್ವಿ ಹೇಳಿದರು.

ನಾಡಗೀತೆಯಲ್ಲಿ ಸೇರಲು ನನ್ನ ಪ್ರಕಾರ ಅರ್ಹವಾದ ನಾಲ್ಕೇ ನಾಲ್ಕು ಹೆಸರುಗಳೆಂದರೆ- ಗೌತಮ, ಬಸವಣ್ಣ , ಅಲ್ಲಮ ಪ್ರಭು ಹಾಗೂ ಅಕ್ಕಮಹಾದೇವಿ ಎಂದು ತೇಜಸ್ವಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X