2004 ರ ಕಾವೇರಿನೀರಿನ ಕಿರಿಕಿರಿಗೆ ತಮಿಳುನಾಡು ರೈತರ ಮುನ್ನುಡಿ
2004
ರ
ಕಾವೇರಿನೀರಿನ
ಕಿರಿಕಿರಿಗೆ
ತಮಿಳುನಾಡು
ರೈತರ
ಮುನ್ನುಡಿ
10
ಟಿಎಂಸಿ
ನೀರು
ಕೊಡುವಂತೆ
ಕೃಷ್ಣರಿಗೆ
ತಮಿಳುನಾಡು
ರೈತರ
ಮೊರೆ
ತಮಿಳುನಾಡಿನ ರೈತರ ಜಂಟಿ ನಿಯೋಗವೊಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ಭೇಟಿಯಾಗಿ ಕಾವೇರಿ ನೀರಿಗೆ ವಿನಂತಿಸುವ ಮೂಲಕ, 2004 ನೇ ಇಸವಿಯ ನೀರಿನ ಕಿರಿಕಿರಿಯ ಮೊದಲ ಅಧ್ಯಾಯ ಪ್ರಾರಂಭವಾದಂತಾಯಿತು. ತಮಿಳುನಾಡು ಕಾವೇರಿ ಪ್ರದೇಶದ ರೈತರ ಹಿತಾಸಕ್ತಿ ಸಮಿತಿ- ತಂಜಾವೂರು, ತಿರುಚನಾಪಳ್ಳಿ ಜಿಲ್ಲಾ ಕಾವೇರಿ ರೈತರ ಹಿತಾಸಕ್ತಿ ಸಮಿತಿ ಹಾಗೂ ಕರೂರಿನ ಸಂಘಟನೆಗಳ ಪ್ರತಿನಿಧಿಗಳು ಜ.14ರಂದು ಮುಖ್ಯಮಂತ್ರಿ ಕೃಷ್ಣ ಅವರು ಭೇಟಿ ಮಾಡಿ ನೀರಿನ ಹಂಚಿಕೆಯ ಕುರಿತು ಮಾತುಕತೆ ನಡೆಸಿದರು.
ಕೃಷಿಯ ಅಗತ್ಯಗಳಿಗನುಸಾರ 10 ಟಿಎಂಸಿ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಕೃಷ್ಣ ಅವರಿಗೆ ಮನವಿ ಸಲ್ಲಿಸಿದ್ದೇವೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕೃಷ್ಣ ತಮಗೆ ಭರವಸೆ ನೀಡಿರುವುದಾಗಿ, ರೈತರ ಸಂಘಟನೆಗಳ ನೇತೃತ್ವ ವಹಿಸಿದ್ದ ತಮಿಳುನಾಡಿನ ಕರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಎನ್.ಶಿವಸುಬ್ರಹ್ಮಣ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ನೀರಿನ ಕೊರತೆಯಿರುವ ಕುರಿತು ಮುಖ್ಯಮಂತ್ರಿ ಕೃಷ್ಣ ತಿಳಿಸಿದರು. ನಾವು ಪ್ರತಿದಿನ 2000 ಕ್ಯುಸೆಕ್ಸ್ನಂತೆ 10 ಟಿಎಂಸಿ ನೀರಿಗೆ ಬೇಡಿಕೆ ಮಂಡಿಸಿದ್ದೇವೆ ಎಂದು ಶಿವಸುಬ್ರಹ್ಮಣ್ಯ ಹೇಳಿದರು.
ಈಗಿನ್ನೂ ಜನವರಿಯ ಮಧ್ಯಭಾಗ ; ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ........ ಶಿವಶಿವಾ, ಚುನಾವಣೆಗಳು ಬೇರೆ ಹೊಸ್ತಿಲಲ್ಲಿವೆ !
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ