ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ವಿಜಯ ಕರ್ನಾಟಕ- ಅಂಕಿತ ಪುಸ್ತಕ ಯುಗಾದಿ ಕಥಾಸ್ಪರ್ಧೆ-04’

By Staff
|
Google Oneindia Kannada News

‘ವಿಜಯ ಕರ್ನಾಟಕ- ಅಂಕಿತ ಪುಸ್ತಕ ಯುಗಾದಿ ಕಥಾಸ್ಪರ್ಧೆ-04’
ಕಥೆ........ ಸೋಜಿಗದ ಬದುಕನ್ನು ಅರಿಯುವ ಸೊಗಸಾದ ವಿಧಾನ

ಇದು ಕಥನ ಸಮಯ !

ಕನ್ನಡ ಕಥಾಲೋಕದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ ‘ವಿಜಯ ಕರ್ನಾಟಕ- ಅಂಕಿತ ಯುಗಾದಿ ಕಥಾಸ್ಪರ್ಧೆ’ಯ ಸಮಯ !!

2004ನೇ ಇಸವಿಯ ‘ವಿಜಯ ಕರ್ನಾಟಕ- ಅಂಕಿತ ಯುಗಾದಿ ಕಥಾಸ್ಪರ್ಧೆ’ಯ ಪ್ರಕಟಣೆ ಇದೀಗ ಹೊರಬಿದ್ದಿದ್ದು , ಕಥೆಗಳನ್ನು ಕಳುಹಿಸಲು ಕೊನೆಯ ದಿನಾಂಕ ಫೆಬ್ರವರಿ 5, 2004. ಬಹುಮಾನಗಳ ವಿವರ :

ಮೊದಲ ಬಹುಮಾನ- 25000 ರೂ.
ಎರಡನೇ ಬಹುಮಾನ- 20000 ರೂ.
ಮೂರನೇ ಬಹುಮಾನ- 15000 ರೂ.

ಸ್ಪರ್ಧೆಯ ನಿಯಮಗಳು :

  • ಕಥೆ ಸ್ವತಂತ್ರ ಕೃತಿಯಾಗಿರಬೇಕು. ಅನುವಾದ, ಸ್ಫೂರ್ತಿ ಆಧಾರಿತವಲ್ಲ.
  • ಹಿಂದೆಲ್ಲೂ ಯಾವ ಮಾಧ್ಯಮದಲ್ಲೂ ಪ್ರಕಟವಾಗಿರಬಾರದು.
  • 2500 ಪದಗಳ ಮೀರುವಂತಿಲ್ಲ .
  • ಕತೆಯನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆಯಿರಿ.
  • ನಿಮ್ಮ ಹೆಸರು, ವಿಳಾಸ ಪ್ರತ್ಯೇಕ ಬಿಳಿಹಾಳೆಯಲ್ಲಿ ಬರೆಯಿರಿ.
  • ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕಥೆಗಳು ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತವೆ.
  • ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕಥೆಗಳ ಸ್ವಾಮ್ಯ ವಿಜಯ ಕರ್ನಾಟಕ-ಅಂಕಿತ ಪುಸ್ತಕದ್ದು .
  • ಕಥೆಗಳನ್ನು ಹಿಂತಿರುಗಿಸುವುದಿಲ್ಲ .
ಇನ್ನೊಮ್ಮೆ ಗಮನಿಸಿ- ಕಥೆ ಕಳುಹಿಸಲು ಫೆಬ್ರವರಿ 5, 2004 ಕೊನೆದಿನ.

ಕಥೆ ಕಳುಹಿಸುವ ವಿಳಾಸ :
ವಿಜಯ ಕರ್ನಾಟಕ (ಯುಗಾದಿ ಕಥಾಸ್ಪರ್ಧೆ ವಿಜ್ಞಾಗ), ನಂ.4, ಪಂಪ ಮಹಾಕವಿ ರಸ್ತೆ , ಚಾಮರಾಜಪೇಟೆ, ಬೆಂಗಳೂರು- 560018. ವಿಜಯಕರ್ನಾಟಕ

ಇ-ಮೇಲ್‌ : [email protected]
ಫ್ಯಾಕ್ಸ್‌ : 80-91-2971157/58

ಶುಭವಾಗಲಿ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಕಥೆಗಾರ್ತಿ- ಕವಯತ್ರಿಯರ ಗಮನಕ್ಕೆ!

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X